Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಹಸುಗಳ ಮೇಲೆ ಆಸಿಡ್‌ ಎರಚಿದ ವೃದ್ಧೆ -ಪ್ರಕರಣ ದಾಖಲು

ನೆಲಮಂಗಲ: ಮನೆಯ ಹತ್ತಿರ ಮೇಯಲು ಬಂದ ಹಸುಗಳ ಮೇಲೆ ವೃದ್ಧೆಯೊಬ್ಬರು  ಆಸಿಡ್‌ ಎರಚಿ ವಿಕೃತಿ ಮೆರೆದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ವೃದ್ಧೆ ಆಸಿಡ್‌ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ.

76 ವರ್ಷದ ಜೋಸೆಫ್ ಗ್ರೇಸ್ ಆಸಿಡ್ ಎರಚಿದ ವೃದ್ದೆ.

ಕಳೆದ ಮೂರು ದಿನಗಳಿಂದ ಮನೆ ಹತ್ತಿರ ಬರುವ ಹಸುಗಳ ಮೇಲೆ ನಿರಂತರವಾಗಿ ವೃದ್ಧೆ ದಾಳಿ ನಡೆಸಿದ್ದಾರೆ.

ಇನ್ನು ಹಸುಗಳಿಗೆ ಬಾತ್ ರೂಂ ಗೆ ಬಳಸುವ ಆಸಿಡ್ ಎರಚಿದ್ದು, ಇದು ನಮ್ಮ ಖಾಸಗಿ ಸ್ಥಳ, ಇಲ್ಲಿ ಹಸುಗಳನ್ನು ಬಿಟ್ಟಿರುವುದು ಹಸುವಿನ ಮಾಲೀಕರ ತಪ್ಪು.  ಹಸುಗಳು ಮನೆ ಬಳಿ ಬರಬಾರದು ಅಂತ ಹೀಗೆ ಮಾಡಿದ್ದು ಅಷ್ಟೇ. ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ದೆ ಸಮಜಾಯಿಷಿ ಕೊಟ್ಟಿದ್ದಾರೆ.

ಘಟನೆಯಿಂದ ನೊಂದ ಮಾಲೀಕರು ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ಇದರೊಂದಿಗೆ ಸುಟ್ಟ ಗಾಯಳಿಂದ ಹಾಲು ಕೂಡ ಕೊಡುತ್ತಿಲ್ಲ ಎಂದು ಮಾಲೀಕರು ಗೋಳಾಡಿದ್ದಾರೆ.

ಇನ್ನು ಮಾಲೀಕರ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.