Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

2011ರ ಹಲ್ಲೆ ಪ್ರಕರಣ: ಬಿಜೆಪಿ ಸಂಸದ ಕಥೇರಿಯಾಗೆ 2 ವರ್ಷ ಜೈಲು ಶಿಕ್ಷೆ

ಲಕ್ನೋ: 2011ರ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗ್ರಾದ ಜನಪ್ರತಿನಿಧಿಗಳ ನ್ಯಾಯಾಲಯವು ಮಾಜಿ ಕೇಂದ್ರ ಸಚಿವ ಮತ್ತು ಇಟಾವಾ (ಉತ್ತರ ಪ್ರದೇಶ)ದ ಪ್ರಸ್ತುತ ಬಿಜೆಪಿ ಸಂಸದ ರಾಮಶಂಕರ್ ಕಥೇರಿಯಾ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆಗ್ರಾದ ಟೊರೆಂಟ್ ಪವರ್ ಲಿಮಿಟೆಡ್‌ನ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಮಶಂಕರ್ ಕಥೇರಿಯಾ ತಪ್ಪಿತಸ್ಥ ಎಂದು ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಇದರಿಂದಾಗಿ ಕಥೇರಿಯಾ ಲೋಕಸಭೆಯಿಂದ ಅನರ್ಹರಾಗುವ ಸಾಧ್ಯತೆ ಇದೆ.