Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

26 ರಂದು ಬೃಹತ್ ಉದ್ಯೋಗ ಮೇಳ-2023

 

ದಾವಣಗೆರೆ;:  ವಿಕಲಚೇತÀನರ ರಾಷ್ಟ್ರೀಯ ವೃತ್ತಿ ಸೇವಾ ಕೇಂದ್ರ, ಭಾರತ ಸರ್ಕಾರ, ಉದ್ಯೋಗ ಮಹಾ ನಿರ್ದೇಶನಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಪೀಣ್ಯ, ಬೆಂಗಳೂರು, ಅಮೇರಿಕಾ ಇಂಡಿಯಾ ಫೌಂಡೇಷನ್ ಮತ್ತು ಸರಕಾರಿ ಗಿರಿಧರ ರಾಮನಾರಾಯಣ ಇನ್‍ಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಪ್ರಾಕ್ಟಿಸ್, ಬೆಂಗಳೂರು ಇವರುಗಳ ಸಹಯೋಗದೊಂದಿಗೆ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ಸರಕಾರಿ ಗಿರಿಧರ ರಾಮನಾರಾಯಣ ಇನಸ್ಟಿಟ್ಯೂಟ್ ಆಫ್ ಕಮರ್ಷಿಯಲ್ ಪ್ರಾಕ್ಟಿಸ್, ಕೆ.ಆರ್. ಸರ್ಕಲ್, ಬೆಂಗಳೂರು ಈ ಆವರಣದಲ್ಲಿ ವಿಕಲಚೇತನ ನಿರುದ್ಯೋಗಿ ಯುವಕ-ಯುವತಿಯರಿಗೆ “ಬೃಹತ್ ಉದ್ಯೋಗ ಮೇಳ-2023  ಆಯೋಜಿಸಲಾಗಿದೆ

ದಾವಣಗೆರೆ ಜಿಲ್ಲೆಯ ಅರ್ಹ ನಿರುದ್ಯೋಗ ವಿಕಲಚೇತನರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾಧಿಕಾರಿ ಡಾ|| ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.