Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

—-ಗುಪ್ತ ಮಂಚಣ್ಣ  ಅವರ ವಚನ .!

 

 

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಲಾಭವ ಕಾಬ ಬೆವಹಾರಿ ನಷ್ಟಕ್ಕೆ ಸಿಕ್ಕುವನೆ?

ಅದು ತನ್ನ ಸಿಕ್ಕಿನ ಬಹುದ ತಾನರಿಯ.

ಈ ಉಭಯವ ತಿಳಿದಲ್ಲಿ ಲಾಭ ನಷ್ಟ ದಿವರಾತ್ರಿಯಂತೆ

ಮಾಟ ಕೂಟದ ಒದಗು.

ವಿಶ್ವಾಸದಲ್ಲಿ ಲಾಭಾ, ಅದು ಹೀನವಾದಲ್ಲಿ ನಷ್ಟ.

ಇಂತೀ ನಷ್ಟ ಲಾಭವ ಬಿಟ್ಟು

ಸುಚಿತ್ತ ನಿರ್ಮಲಾತ್ಮಕನಾಗಿ ಅರಿದು ಕರಿಗೊಳ್ಳಬೇಕು.

ನಾರಾಯಣಪ್ರಿಯ ರಾಮನಾಥನಲ್ಲಿಚಿತ್ತಶುದ್ಧನಾಗಿರಬೇಕು.

 

-ಗುಪ್ತ ಮಂಚಣ್ಣ