Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಆಸ್ತಿ ಆಸೆಗಾಗಿ ಪತ್ನಿಯನ್ನೇ ಕೊಂದ ಪಾಪಿ ಪತಿ..!

ಮಂಡ್ಯ: ಆಸ್ತಿ ಆಸೆಗೆ ಪತಿಯೇ ಪತ್ನಿಯ ಕೊಲೆ‌ ಮಾಡಲಾಗಿರುವ ಘಟನೆ ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ ನಡೆದಿದೆ. ಮಂಡ್ಯದ ಖಾಸಗಿ‌ ಕಾಲೇಜಿನಲ್ಲಿ ಪ್ರಾಧ್ಯಪಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಹಣದ ದಾಹಕ್ಕೆ ಬಿದ್ದು ದಿಂಬು, ಬೆಡ್​ಶೀಟ್​​ನಿಂದ ಉಸಿರುಗಟ್ಟಿಸಿ ಪತ್ನಿಯನ್ನೇ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿ ಬಳಿಕ ಸಹಜ ಸಾವೆಂದು ನಾಟಕವಾಡಿದ್ದ, ಆದರೆ ಈ ನಾಟಕ ಬಯಲಾಗಿದ್ದು ಹಂತಕ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಎಸ್.ಶೃತಿ(32) ಕೊಲೆಯಾದವರು, ಟಿ.ಎನ್.ಸೋಮಶೇಖರ್(41) ಬಂಧಿತ ಆರೋಪಿ.

ಪತ್ನಿ ಶೃತಿ ಆಸ್ತಿಯ ಮೇಲೆ ಆಸೆಯಿದ್ದ ಕಾರಣಕ್ಕೆ ಕೊಂದಿರೋದಾಗಿ ಪೊಲೀಸರ ಬಂಧನದ ಬಳಿಕ ವಿಚಾರಣೆಯ ವೇಳೆ ಟಿ.ಎನ್.ಸೋಮಶೇಖರ್ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.