Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಬಿಜೆಪಿ ವಿಪಕ್ಷ ನಾಯಕನ ಆಯ್ಕೆ ಮಾಡಿದ್ರೆ ಪಕ್ಕಾ ಛಿದ್ರಛಿದ್ರ..!

 

ಬೆಂಗಳೂರು: ಅಧ್ಯಕ್ಷ ಹುದ್ದೆ ಬದಲಾವಣೆಯನ್ನೇ BJPಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಸಹನೆ, ವೈಮನಸ್ಸು ಸ್ಫೋಟವಾಗಿದೆ. ಇನ್ನು ವಿಪಕ್ಷ ನಾಯಕನ ಆಯ್ಕೆ ಮಾಡಿದರೆ BJP ಛಿದ್ರ ಛಿದ್ರವಾಗುವುದು ಖಂಡಿತ! ಎಂದು ಕಾಂಗ್ರೆಸ್ ಟ್ವಿಟ್ ಮಾಡಿ BJPಯನ್ನ ಕಾಲೆಳೆದಿದೆ.!

ನಾಯಕತ್ವವಿಲ್ಲದ ಬಿಜೆಪಿಯಲ್ಲಿ ಈಗ ಎಲ್ಲರಿಗೂ ನಾನೇ ನಾಯಕ ಎನಿಸಿಕೊಳ್ಳಬೇಕು ಎಂಬ ಹಪಾಹಪಿಯಿದೆ. ಇಂತಹ ಹೊತ್ತಲ್ಲಿ ವಿಪಕ್ಷ ನಾಯಕನಾಗಲು ಸರ್ವಸಮ್ಮತ ಹಾಗೂ ಸಮರ್ಥ ವ್ಯಕ್ತಿ ಬಿಜೆಪಿಗೆ ಈ ಜನ್ಮದಲ್ಲಿ ಸಿಗಲು ಸಾಧ್ಯವಿಲ್ಲ ಎಂದು ಜರಿದಿದೆ.