Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಭಾರತದ ವಿರುದ್ಧ ಮತ್ತೆ ನಾಲಿಗೆ ಹರಿಬಿಟ್ಟ ಪಾಕ್ ನಟಿ – ಭಾರತದ ನಿಜವಾದ ಮುಸ್ಲಿಮರಿಗೆ ಅಭಿನಂದನೆಗಳು ಎಂದ ಸೆಹರ್ ಶಿನ್ವಾರಿ

ವಿಶ್ವಕಪ್​ ಆರಂಭವಾದಾಗಿನಿಂದಲೂ ಭಾರತದ ವಿರುದ್ಧ ಕಿಡಿಕಾರುತ್ತಿರುವ ಪಾಕ್​ ನಟಿ ಸೆಹರ್​ ಶಿನ್ವಾರಿ ಮತ್ತೊಮ್ಮೆ ತನ್ನ ನಾಲಿಗೆಯನ್ನು ಹರಿಬಿಟ್ಟಿದ್ದಾಳೆ. ವಿಶ್ವಕಪ್​ ಟೂರ್ನಿಯಲ್ಲಿ ತಮ್ಮ ತಂಡ ಹೀನಾಯವಾಗಿ ಸೋತಿದ್ದನ್ನು ತಡೆಯಲಾಗದೇ ಭಾರತ ಮೇಲೆ ಕೆಂಡಕಾರುತ್ತಿರುವ ಶಿನ್ವಾರಿ, ತನ್ನ ಎಕ್ಸ್​ ಖಾತೆಯಲ್ಲಿ ಸರಣಿ ಪೋಸ್ಟ್​ ಮಾಡುವ ಮೂಲಕ ಭಾರತೀಯರ ಸ್ವಾಭಿಮಾನ ಕೆಣಕುತ್ತಿದ್ದಾಳೆ.

ಭಾರತೀಯ ಅಹಂ ಅನ್ನು ತಲೆ ತಗ್ಗಿಸುವಂತೆ ಮಾಡಿದ ಆಸ್ಟ್ರೇಲಿಯನ್ನರಿಗೆ ಅಭಿನಂದನೆಗಳು ಎಂದಿರುವ ಶಿನ್ವಾರಿ, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ನಿಜವಾದ ಮುಸ್ಲಿಮರಿಗೆ ಅಭಿನಂದನೆಗಳು ಎನ್ನುವ ಮೂಲಕ ನಾಲಿಗೆ ಹರಿಬಿಟ್ಟಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಆಕೆ, ಪ್ರಧಾನಿ ಮೋದಿ ಭಾರತಕ್ಕೆ ಅಂತಹ ವಿಪತ್ತು ಎಂಬುದನ್ನು ಸಾಬೀತುಪಡಿಸಿದರು. ಭಯೋತ್ಪಾದಕ ಮೋದಿ ತನ್ನ ತಂಡವನ್ನು ಸೋಲಿಸಿದರು. ಮಹಮ್ಮದ್ ಘೋರಿ, ಪೃಥ್ವಿ ರಾಜ್ ಚೌಹಾಣ್​ ಅವರನ್ನು ಯುದ್ಧದಲ್ಲಿ ಸೋಲಿಸಿದ ರೀತಿಯಲ್ಲಿಯೇ ಇಂದು ಆಸ್ಟ್ರೇಲಿಯಾ, ಭಾರತವನ್ನು ಸೋಲಿಸಿದೆ ಎಂಬ ಬರಹಗಳ ಮೂಲಕ ಭಾರತೀಯರನ್ನು ಶಿನ್ವಾರಿ ಕೆಣಕಿದ್ದಾಳೆ.

ಭಾರತೀಯರೇ, ನಿನ್ನೆ ಆಸ್ಟ್ರೇಲಿಯಾ ನಿಮಗೆ ನಾಯಿಗೆ ಹೊಡೆದಂತೆ ಹೊಡೆದದ್ದು ಹೇಗೆ? ಎಂದು ಹದ್ದು ಮೀರಿ ಮಾತನಾಡಿದ್ದಾಳೆ. ಶಿನ್ವಾರಿಗೆ ಭಾರತೀಯರು ಕೂಡಾ ಸಕತ್ ತಿರುಗೇಟು ನೀಡಿದ್ದಾರೆ. ಕನಿಷ್ಠ ಪಕ್ಷ ನಾವು ಫೈನಲ್​ ಆದರೂ ತಲುಪಿದ್ದೇವೆ. ನಿಮ್ಮ ತಂಡ ಲೀಗ್​ನಲ್ಲೇ ತವರು ಸೇರಿಕೊಂಡಿತು ಎಂದು ನೆಟ್ಟಿಗರು ಶಿನ್ವಾರಿಗೆ ತಿರುಗೇಟು ನೀಡಿದ್ದಾರೆ. ಪ್ರೀತಿಯ ಮಗಳೇ, ನೀನು ಇರುವ ಜಾಗವನ್ನು ಮೊದಲು ನೋಡಿಕೋ, ಮೊದಲು ಅಲ್ಲಿನ ಮುಸ್ಲಿಮರ ಬಗ್ಗೆ ಯೋಚಿಸು. ನಿಮ್ಮಲ್ಲಿ ತಿನ್ನಲು ಸಹ ಆಹಾರದ ಕೊರತೆಯಿದೆ ಮತ್ತು ಹಿಟ್ಟು ಬೇಕಾದರೆ ನಮಗೆ ಹೇಳಿ, ನಾವು ಮಕ್ಕಳನ್ನು ಹಸಿವಿನಿಂದ ಇಡುವುದಿಲ್ಲ, ನಾವು ಕಳುಹಿಸುತ್ತೇವೆ ಎಂದು ಸರಿಯಾಗಿ ತಿರುಗೇಟು ನೀಡಿದ್ದಾರೆ.