Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ತಾಯಿಯ ಹುಟ್ಟುಹಬ್ಬದಂದೇ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ 11 ತಿಂಗಳ ಕಂದ

ಮುಂಬಯಿ: ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟಾಗಿ 11 ತಿಂಗಳ ಮಗು ಮೃತಪಟ್ಟಿರುವ ದಾರುಣ ಘಟನೆ ಮುಂಬಯಿಯ ಭಾಯಂದರ್ ನಲ್ಲಿ ಸೋಮವಾರ ನಡೆದಿದೆ.

ಭಾಯಂದರ್ನ ಉತ್ತಾನ್ ರಸ್ತೆಯಲ್ಲಿರುವ ರಾಯ್ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ ಘಟನೆಯಲ್ಲಿ 11 ತಿಂಗಳ ದಕ್ಷ್ ಷಾ ಮೃತಪಟ್ಟ ಮಗು. ಭಾನುವಾರ ದಕ್ಷ್ ಅವರ ತಾಯಿ ಜಿಗ್ನಾ ಅವರ ಹುಟ್ಟುಹಬ್ಬವಿತ್ತು. ಈ ಕಾರಣದಿಂದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಕುಟುಂಬ ಬೈಕ್ ನಲ್ಲಿ ಗೊರೈ ಬೀಚ್‌ಗೆ ತೆರಳುತ್ತಿದ್ದರು. ಮಗು ದಕ್ಷ್ ಮುಂದೆ ಬೈಕ್‌ ನ ಟ್ಯಾಂಕ್‌ ಬಳಿ ಕೂತಿದ್ದು, ಮಗುವಿನ ತಾಯಿ ಮತ್ತು ಅಕ್ಕ ಬೈಕ್ ನ ಹಿಂದೆ ಕೂತಿದ್ದರು. ಬೀಚ್ ಗೆ ಹೋಗುತ್ತಿದ್ದ ಮಾರ್ಗದಲ್ಲಿ ಕೆಸರು ತುಂಬಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ಕೆಳಗೆ ಬಿದ್ದಿದೆ.

ಇದರ ಪರಿಣಾಮ ತಂದೆ, ತಾಯಿ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಮುಂದೆ ಕೂತಿದ್ದ ದಕ್ಷ್ ತಲೆಗೆ ತೀವ್ರತರದ ಗಾಯಗೊಂಡ ಪರಿಣಾಮ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ವರದಿ ದಾಖಲಾಗಿದೆ.