Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಮೈಸೂರು ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ಆನೆಯ ಮೇಲೆ ಒಂಟಿ ಸಲಗ ದಾಳಿ, ಸಾವು

ಮೈಸೂರು: ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ದಬ್ಬಹಳ್ಳಿಯಲ್ಲಿ ಒಂಟಿ ಸಲಗದ ದಾಳಿಯಿಂದಾಗಿ ಮೈಸೂರು ದಸರಾ ವೇಳೆ ಅಂಬಾರಿ ಹೊತ್ತಿದ್ದ ಅರ್ಜುನ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಒಂಟಿ ಸಲಗವು ದಾಳಿ ಮಾಡಿದ್ದರಿಂದ ಅರ್ಜುನ ಆನೆಗೆ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ತೀವ್ರ ರಕ್ತ ಸ್ರಾವದಿಂದ ಮೃತಪಟ್ಟಿದೆ. ಕಾಡಾನೆ ಸೆರೆ ಹಿಡಿಯವ ವೇಳೆ ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
8 ಬಾರಿ ಮೈಸೂರು ದಸರಾ ವೇಳೆಯಲ್ಲಿ ಚಿನ್ನದ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಗಜಪಡೆಯ ಕ್ಯಾಪ್ಟನ್‌ ಆಗಿತ್ತು.

ಅಕೇಶಿಯಾ ಕಾಡಿನಲ್ಲಿ ಮದ ಬಂದಿದ್ದ ಕಾಡಾನೆ ಏಕಾಏಕಿ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ. ಘಟನೆಯ ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.