Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಸಂಬದ್ಧ ವರದಿ ಮಾಡಬೇಡಿ, ಸಭೆಗೆ ಹೋಗದಿರಲು ಬೇರೆ ಕಾರಣ ಇದೆ – ನಿತೀಶ್‌ಕುಮಾರ್

ಪಾಟ್ನಾ: ನಾನು “ಇಂಡಿಯಾ” ಮೈತ್ರಿಕೂಟದ ಸಭೆಗೆ ಹಾಜರಾಗದಿರಲು ಬೇರೆ ಕಾರಣ ಇದೆ. ಆದರೆ ಮಾಧ್ಯಮಗಳಲ್ಲಿ ನಾನು ಸಭೆಗೆ ಹೋಗದಿರುವ ಬಗ್ಗೆ ಅಸಂಬದ್ಧ ವರದಿಗಳನ್ನು ಬಿತ್ತರಿಸಲಾಗಿದೆ. ಈ ರೀತಿ ವರದಿ ಮಾಡಬೇಡಿ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಹೇಳಿದ್ದಾರೆ. ಪಂಚರಾಜ್ಯ ಚುನಾವಣೆಯಲ್ಲಿ “ಇಂಡಿಯಾ” ಮೈತ್ರಿಕೂಟದ ಸೋಲಿನ ಬಗ್ಗೆ ಚರ್ಚೆ ಮಾಡಲು ದೆಹಲಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಅನೇಕ ನಾಯಕರು ಸಭೆಗೆ ಹಾಜರಾಗದಿರುವ ಕಾರಣ ಸಭೆ ರದ್ದುಗೊಂಡಿತ್ತು. ಈ ಸಭೆಗೆ ಮೈತ್ರಿಕೂಟದ ನಾಯಕರಲ್ಲಿ ಒಬ್ಬರಾದ ನಿತೀಶ್‌ಕುಮಾರ್ ಕೂಡ ಹೋಗಿರಲಿಲ್ಲ. ಹೀಗಾಗಿ ಈ ಬಗ್ಗೆ ಪ್ರಶ್ನಿಸಿದ ಮಾಧ್ಯಮಗಳ ಮೇಲೆ ನಿತೀಶ್‌ಕುಮಾರ್ ಅಸಮಾಧಾನಿತರಾಗಿದ್ದಾರೆ. ನಾನು ಸಭೆಗೆ ಹೋಗದಿರುವ ಕಾರಣಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳೇ ಅಸಂಬದ್ಧ. ಆ ವೇಳೆ ನನಗೆ ಅನಾರೋಗ್ಯ ಇತ್ತು. ಹೀಗಾಗಿ ನಾನು ಸಭೆಗೆ ಹಾಜರಾಗಿರಲಿಲ್ಲ ಎಂದು ನಿತೀಶ್‌ಕುಮಾರ್ ಹೇಳಿದ್ದಾರೆ.