Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಪ್ರಧಾನಿ ಹುದ್ದೆಗೆ ಗೌರವ ನೀಡಬೇಕು : ಎನ್ ಸಿಪಿ ನಾಯಕ ಶರದ್ ಪವಾರ್

ನವದೆಹಲಿ: ಪ್ರಧಾನಿ ಮೋದಿ ಕೆಲ ದಿನಗಳ ಹಿಂದೆಯಷ್ಟೇ ಲಕ್ಷ ದ್ವೀಪಕ್ಕೆ ಭೇಟಿ ನೀಡಿ, ಅದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಮೋದಿಯ ಈ ಹೇಳಿಕೆಯನ್ನು ಖಂಡಿಸಿ ಮಾಲ್ಡೀವ್ಸ್ ನ ಕೆಲವು ಸಚಿವರು ಅವಹೇಳನಕಾರಿ ಪೋಸ್ಟ್ ಹಾಕುವ ಮೂಲಕ ವಿರೋಧ ಕೂಡ ವ್ಯಕ್ತಪಡಿಸಿದ್ದರು. ಆದರೆ ಇದೀಗ ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಅವಹೇಳನಕಾರಿ ಪೋಸ್ಟ್ ವಿರುದ್ದ ಅಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಹೊರಗಿನವರು, ಯಾವುದೇ ಹುದ್ದೆಯಲ್ಲಿದ್ದವರಾದರೂ ನಮ್ಮ ಪ್ರಧಾನಿಯವರ ಬಗ್ಗೆ ಮಾತನಾಡಿದರೆ ಖಡ ಖಂಡಿತವಾಗಿ ನಾನು ಮಾತ್ರ ಸಹಿಸುವುದಿಲ್ಲ ಎಂದಿದ್ದಾರೆ.

ಇನ್ನು ಮಾಲ್ಡೀವ್ಸ್ ನ ಉಪಸಚಿವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ನಿಂದನಾರ್ಹ ಮಾತುಗಳನ್ನು ಆಡಿದ್ದಾರೆ. ಆದರೆ ಮೋದಿ ಅವರು ನಮ್ಮ ದೇಶದ ಪ್ರಧಾನಿ. ಅವರ ಹುದ್ದೆಗೆ ಗೌರವ ನೀಡಬೇಕು ಎಂದು ತಿಳಿಸಿದ್ದಾರೆ.