Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಮಮಂದಿರ ಉದ್ಘಾಟನೆಯಂದೇ ನಟ ಧ್ರುವ ಸರ್ಜಾ ಇಬ್ಬರು ಮಕ್ಕಳಿಗೆ ನಾಮಕರಣ

ಬೆಂಗಳೂರು: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಂಪನ್ನಗೊಂಡಿದ್ದು, ಈ ಶುಭದಿನದಂದೇ ನಟ ಧ್ರುವ ಸರ್ಜಾ ದಂಪತಿ ತಮ್ಮ ಇಬ್ಬರು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ.

2022ರ ಅ 2 ರಂದು ಧ್ರುವ ದಂಪತಿಗೆ ಮೊದಲ ಮಗಳ ಜನನವಾಗಿತ್ತು. ಹಾಗೆಯೇ, 2023 ರ ಸೆಪ್ಟೆಂಬರ್ನಲ್ಲಿ ಗಂಡು ಮಗುವಿನ ಜನನವಾಗಿತ್ತು. ಆದರೆ ಮಕ್ಕಳ ಹೆಸರುಗಳೇನು ಎಂಬುದನ್ನು ಅವರು ಎಲ್ಲಿಯೂ ಹೇಳಿರಲಿಲ್ಲ. ಮಗನಿಗೆ ಈಗ ನಾಲ್ಕು ತಿಂಗಳು ತುಂಬಿದೆ, ಮಗಳಿಗೆ ಆಗಲೇ ಒಂದೂವರೆ ವರ್ಷ ತುಂಬಿದೆ.

ಇದೀಗ ಈ ಇಬ್ಬರು ಕಂದಮ್ಮಗಳ ನಾಮಕರಣ ಸಮಾರಂಭವನ್ನು ಕನಕಪುರ ರಸ್ತೆಯಲ್ಲಿರುವ ತಮ್ಮ ಫಾರ್ಮ್ ಹೌಸ್ನಲ್ಲಿ ಅದ್ದೂರಿಯಾಗಿ ನೆರೆವೇರಿಸಿರುವ ದ್ರುವ ಸರ್ಜಾ ಕುಟುಂಬಸ್ಥರ ಸಮ್ಮುಖದಲ್ಲಿ ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ, ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರಿಟ್ಟಿದ್ದಾರೆ.

ಇನ್ನು ಎಲ್ಲರಿಗೂ ತಿಳಿದಿರುವ ಹಾಗೆ ಧ್ರುವ ಸರ್ಜಾ ಅವರು ಹನುಮನ ಭಕ್ತರು. ಆಂಜನೇಯನ ಕಂಡರೆ ಅವರಿಗೆ ಅಪಾರ ಭಕ್ತಿ. ರಾಮನ ಬಂಟ ಎಂಬ ಖ್ಯಾತಿ ಆಂಜನೇಯನಿಗೆ ಇದೆ. ಈ ಕಾರಣದಿಂದಲೇ ರಾಮ ಮಂದಿರದಲ್ಲಿ ನಡೆಯಲಿರುವ ವಿಶೇಷ ಕಾರ್ಯಕ್ರಮದ ದಿನವೇ ಮಕ್ಕಳಿಗೆ ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.