Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕೇಂದ್ರ ಸರ್ಕಾರ : ಶೌರ್ಯ ಪ್ರಶಸ್ತಿ ಪ್ರಕಟ.!

 

ದೆಹಲಿ: ಗಣರಾಜ್ಯೋತ್ಸವದಂದು ಭದ್ರತಾ ಪಡೆಗಳಿಗೆ ಕೇಂದ್ರ ಸರ್ಕಾರ ‘ಶೌರ್ಯ ಪ್ರಶಸ್ತಿ’ಗಳನ್ನು ಘೋಷಿಸಿದೆ. ಪೊಲೀಸ್, ಅಗ್ನಿಶಾಮಕ ಸೇವೆ, ಗೃಹರಕ್ಷಕ ದಳ, ನಾಗರಿಕ ರಕ್ಷಣಾ ಮತ್ತು ಸುಧಾರಣಾ ಸೇವೆ ವಿಭಾಗಗಳಲ್ಲಿ 277 ಜನರಿಗೆ ಶೌರ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಇನ್ನು 855 ಮಂದಿ ಸೇವಾ ಪದಕ ಪಡೆಯಲಿದ್ದಾರೆ. ಒಟ್ಟು 1,132 ಜನರಿಗೆ ಈ ಪದಕಗಳನ್ನು ನೀಡಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿದವರಿಗೆ ಅತ್ಯಧಿಕ ಸಂಖ್ಯೆಯ ಶೌರ್ಯ ಪದಕಗಳು (133) ಲಭಿಸಿವೆ.