Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಜುಲೈನಲ್ಲಿ ಪೂರ್ಣ ಬಜೆಟ್‌ ಮಂಡನೆ : ಮಾತಲ್ಲೇ ಮತ್ತೊಮ್ಮೆ ಬಿಜೆಪಿ ಸುಳಿವು ಕೊಟ್ಟ ನಿರ್ಮಲಾ

ದೆಹಲಿ : ಸಂಸತ್ತಿನಲ್ಲಿ ಮಂಧ್ಯಂತರ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕುತೂಹಲಕಾರಿ ಕಾಮೆಂಟ್‌ ಮಾಡಿದ್ದಾರೆ. ಇದು ಮಧ್ಯಂತರ ಬಜೆಟ್‌ ಮಾತ್ರ. ‘ವಿಕಸಿತ ಭಾರತವನ್ನು ಸಾಧಿಸಲು ನಮ್ಮ ಸರ್ಕಾರದ ವಿವರವಾದ ಮಾರ್ಗಸೂಚಿಯನ್ನು ಜುಲೈನಲ್ಲಿ ಪೂರ್ಣ ಬಜೆಟ್‌ನೊಂದಿಗೆ ಮಂಡಿಸುತ್ತೇವೆ’ ಎಂದಿದ್ದಾರೆ. ಈ ಮೂಲಕ 2024 ರಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲಲಿದೆ ಎಂದು ಅವರು ಪರೋಕ್ಷವಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನೀವು ತುಂಬಾ ಆತ್ಮವಿಶ್ವಾಸದಿಂದ ಇದ್ದೀರಿ ಎಂದು ನೆಟ್ಟಿಗರು ಕಾಮೆಂಟ್‌ ಮಾಡುತ್ತಿದ್ದಾರೆ.