Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಸಿಧು ಮೂಸೆವಾಲಾ ಹಂತಕರಿಗೆ ಸಹಾಯ ಮಾಡಿದ್ದ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಆಪ್ತ ಅರೆಸ್ಟ್

ಪಂಜಾಬ್: ಗಾಯಕ ಸಿಧು ಮೂಸೆವಾಲಾ ಹಂತಕರಿಗೆ ಸಹಾಯ ಮಾಡಿದ್ದ ಆರೋಪದ ಮೇಲೆ ಗ್ಯಾಂಗ್​ಸ್ಟರ್​ ಲಾರೆನ್ಸ್​ ಬಿಷ್ಣೋಯ್​ ಆಪ್ತನನ್ನು ಪಂಜಾಬ್​ನಲ್ಲಿ ಬಂಧಿಸಲಾಗಿದೆ.

ಜತೀಂದರ್ ಸಿಂಗ್ ಎಂಬಾತನೊಂದಿಗೆ ಮನದೀಪ್ ಸಿಂಗ್ ಅಲಿಯಾಸ್ ಛೋಟಾ ಮಣಿಯನ್ನು ಬಂಧಿಸಲಾಗಿದೆ.

ಇನ್ನು ಬಂಧಿತರಿಂದ ಎರಡು ಪಿಸ್ತೂಲ್‌ಗಳು ಮತ್ತು 12 ಜೀವಂತ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಗೌರವ್ ಯಾದವ್ ಮಾಹಿತಿ ನೀಡಿದ್ದಾರೆ.

ಜಿರಾಕ್‌ಪುರ ಪ್ರದೇಶದಲ್ಲಿ ಛೋಟಾ ಮಣಿ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪಂಜಾಬ್ ಪೊಲೀಸರ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್ ತಂಡಗಳು ಅವನನ್ನು ಪತ್ತೆಹಚ್ಚಿ ಸಹಚರನೊಂದಿಗೆ ಬಂಧಿಸಿದೆ.