Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಇನ್ನುಮುಂದೆ ಎಲ್ಲ ಗ್ರಾ.ಪಂ.ಗಳಲ್ಲಿ ಬಜೆಟ್‌ ಮಂಡನೆ

ರಾಜ್ಯದಲ್ಲಿ ಗ್ರಾಮ ಪಂಚಾಯತ್‌ಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು ಇನ್ನುಮುಂದೆ ಪಂಚಾಯತ್‌ಗಳಲ್ಲಿಯೂ ಬಜಿಟ್‌ ಮಂಡಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದಾರೆ. ಗ್ರಾಮ ಪಂಚಾಯತ್‌ಗಳ
ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ & ವಿತ್ತೀಯ ಶಿಸ್ತಿನ ಅರಿವು ಮೂಡಿಸಲು ಬಜೆಟ್‌ ಮಂಡಿಸಿ ಅನುಮೋದನೆಪಡೆಯುವಂತೆ ಎಲ್ಲ ಗ್ರಾ.ಪಂ. ಅಧ್ಯಕ್ಷಕರಿಗೆ ಪತ್ರ ಬರೆದಿದ್ದಾರೆ.

ಗ್ರಾ.ಪಂ.ಗಳ ಸಭೆಗಳಲ್ಲಿ ಮಾ.10ರೊಳಗೆ ಅಭಿವೃದ್ಧಿ ಯೋಜನೆ ಒಳಗೊಂಡ ಆಯವ್ಯಯ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಸಚಿವರು ಸೂಚನೆ ಕೊಟ್ಟಿದ್ದಾರೆ.