Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಡ್ಡ ಮತದಾನ – ಬಿಜೆಪಿಯಿಂದ ಎಸ್ ಟಿ ಸೋಮಶೇಖರ್ ವಿರುದ್ದ ಪ್ರತಿಭಟನೆ

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವ ಶಾಸಕ ಎಸ್ ಟಿ  ಸೋಮಶೇಖರ್ ವಿರುದ್ದ ಇದೀಗ ಬಿಜೆಪಿ ಪಕ್ಷದಲ್ಲಿ ಆಕ್ರೊಶ ಭುಗಿಲೆದ್ದಿದೆ. ಯಶವಂತಪುರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಂದ ಸೋಮಶೇಖರ್ ವಿರುದ್ದ ಪ್ರತಿಭಟನೆ ನಡೆಸಿದರು.ಪಕ್ಷಕ್ಕೆ ದ್ರೋಹ ಬಗೆದ,  ಸ್ವಾರ್ಥ ರಾಜಕಾರಣ ಮಾಡುತ್ತಿರುವ  ಎಸ್‌ಟಿ ಸೋಮಶೇಖರ್‌ಗೆ ದಿಕ್ಕಾರ,  ಬಿಜೆಪಿ ಬಿಟ್ಟು ತೊಲಗಿ ಎಂದು ಕಾರ್ಯಕರ್ತರು ಘೋಷ ವಾಕ್ಯ ಕೂಗುವ ಮೂಲಕ  ಆಕ್ರೋಶ ವ್ಯಕ್ತಪಡಿಸಿದರು.  ಇದೇ ಪ್ರತಿಭಟನೆ ವೇಳೆ ಟೈರ್‌ಗೆ ಬೆಂಕಿ ಹಚ್ಚಿ ಎಸ್‌ಟಿಎಸ್‌ ಫೋಟೋವನ್ನು ಬೆಂಕಿಗೆ ಹಾಕಿ ಘೋಷಣೆ ಕೂಗಿದರು.