Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಗೌರವ ಡಾಕ್ಟರೇಟ್ ಬಂದಿಲ್ಲ.! ಹೀಗಂತ ನಿರ್ದೇಶಕ ಟಿ ಎನ್ ಸೀತಾರಾಮ್ ಹೇಳಿದ್ದೇಕೆ.?

 

 

ಬೆಂಗಳೂರು: ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ಹಂಚಿಕೊಂಡು ಸ್ಪಷ್ಟನೆ ನೀಡಿದ ಎನ್.ಸೀತಾರಾಮ್ ಎಲ್ಲರಿಗೂ ನಮಸ್ಕಾರಗಳು, ನನಗೆ ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಬಂದಿದೆ ಎಂದು ತುಂಬಾ ತುಂಬಾ ಜನ ನನ್ನನ್ನು ಅಭಿನಂದಿಸಿ ಹಾರೈಸಿದ್ದಿರಿ.

ಆದರೆ ಅದು ಮಾನ್ಯ ಶ್ರೀ ಎಂ.ಆರ್. ಸೀತಾರಾಮ್ ರವರಿಗೆ ಬಂದಿದ್ದು ಟಿ.ಎನ್.ಸೀತಾರಾಮ್ ಎಂದು ಕೆಲವು ಪತ್ರಿಕೆಗಳಲ್ಲಿ ತಪ್ಪಾಗಿ ಬಂದಿರುವಂತೆ ಕಾಣುತ್ತದೆ.. ನನಗೆ ಡಾಕ್ಟರೇಟ್ ಬಂದಿಲ್ಲ.ಸಂಬಂಧಪಟ್ಟವರೂ ನನಗೆ ಡಾಕ್ಟರೇಟ್ ಬಂದಿದೆ ಎಂದು ಹೇಳಿರಲಿಲ್ಲ. ಹಾಗಾಗಿ ಸಾವಿರಾರು ಸಹೃದಯರು ನನಗೆ ಪ್ರೀತಿಯಿಂದ ಅಭಿನಂದಿಸಿದ್ದೀರಿ ಮತ್ತು ಹಾರೈಸಿದ್ದೀರಿ  ನಿಮ್ಮೆಲ್ಲರ ಪ್ರೀತಿ ಮತ್ತು ಅಭಿನಂದನೆಗಳಿಗೆ ಸಹಸ್ರ ಸಹಸ್ರ ಕೃತಜ್ಞತೆಗಳು. ನಿಮ್ಮೆಲ್ಲರ ಪ್ರೀತಿ ಹಾಗೇ ಇರಲಿ ಎಂದು ಪ್ರಾರ್ಥನೆ.. ಬಯಸದೇ ಬಂದಿದ್ದ ಎರಡು ದಿನದ ಪಟ್ಟ ಇದು..ಗೌರವ ಡಾಕ್ಟರೇಟ್ ಪಡೆದಿರುವ ಹಿರಿಯರಿಗೆ ಹಾರ್ದಿಕ ಅಭಿನಂದನೆಗಳು ಮತ್ತು ಶುಭಾಶಯಗಳು ಎಂದು ಅವರು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.