Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ರಾಜ್ಯ ಸರಕಾರಿ ನೌಕರರು ಕಡ್ಡಾಯವಾಗಿ ಇದನ್ನು ಪಾಲಿಸಬೇಕು.!

 

ಬೆಂಗಳೂರು : ಇನ್ನೂ ಮುಂದೆ ರಾಜ್ಯ ಸರ್ಕಾರದ ಎಲ್ಲಾ ನೌಕರರು ತಮ್ಮ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್‌ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ .

ರಾಜ್ಯ ಸರಕಾರದ ಗ್ರೂಪ್ – ಎ. ಬಿ ಹಾಗೂ ಸಿ ನೌಕರರು ಹಾಗೂ ಸಾರ್ವಜನಿಕ ವಲಯದ ಮಂಡಳಿಗಳು, ನಿಗಮಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರ ಆಸ್ತಿ- ಹೊಣೆಗಾರಿಕೆ ವಿವರವನ್ನು ವೆಬ್‌ ಸೈಟ್ ಗಳಲ್ಲಿ ಪ್ರಕಟಿಸುವುದು ಕಡ್ಡಾಯವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಆಡಳಿತ ಸುಧಾರಣ ಆಯೋಗ 7ನೆ ವರದಿಯನ್ನು ಶಿಫಾರಸ್ಸು ಮಾಡಿದೆ .

ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅಧ್ಯಕ್ಷತೆಯ ಆಯೋಗವು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಏಳನೇ ವರದಿ ಸಲ್ಲಿಸಿತು. 9 ಇಲಾಖೆಗಳಲ್ಲಿ ಆಡಳಿತ ಸುಧಾರಣೆ ಸಂಬಂಧ 527 ಶಿಫಾರಸು ಸಲ್ಲಿಸಿದೆ. ಆ ಮೂಲಕ ಒಟ್ಟು ಏಳು ವರದಿಗಳಡಿ 39 ಇಲಾಖೆಗಳ ಸಂಬಂಧ 5039 ಶಿಫಾರಸುಗಳನ್ನು ಸಲ್ಲಿಸಿದಂತಾಗಿದೆ.!