Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಕ್ಯಾನ್ಸರ್‌ಪೀಡಿತ ಬಾಲಕನ IPS ಕನಸು ನನಸು ಮಾಡಿದ ಬೆಂಗಳೂರು ಪೊಲೀಸರು

ಬೆಂಗಳೂರು ಪೊಲೀಸರು ಬಾಲಕನೊಬ್ಬನ ಕನಸು ನನಸು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕ್ಯಾನ್ಸರ್‌ನಿಂದ ಬಳಲುತ್ತಿದ್ದ 10 ವರ್ಷದ ಬಾಲಕ ಮಲ್ಲಿಕಾರ್ಜುನ್‌ ಎಂಬ ಹುಡುಗನ ಆಸೆಯನ್ನು ಈಡೇರಿಸಿದ್ದಾರೆ. ಮಲ್ಲಿಕಾರ್ಜುನ್‌ ಸಣ್ಣ ವಯಸ್ಸಿನಿಂದಲೇ IPS
ಮಾಡುವ ಕನಸು ಹೊಂದಿದ್ದ. ಆದರೆ, ಸಣ್ಣ ವಯಸ್ಸಿನಲ್ಲೇ ಹುಡುಗನಿಗೆ ಕ್ಯಾನ್ಸರ್‌ ವಕ್ಕರಿಸಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

IPS ಅಧಿಕಾರಿಯಾಗುವ ಕನಸಿನ ಈ ಬಾಲಕನನ್ನು ಒಂದು ದಿನದ ಮಟ್ಟಿಗೆ ಪೊಲೀಸ್‌ ಅಧಿಕಾರಿಯ ದಿರಸಿನಲ್ಲಿ ಕಚೇರಿಯಲ್ಲಿ ಕೂರಿಸಿ ಆತನ ಆಸೆಯನ್ನು
ಪೂರೈಸಿದ್ದಾರೆ.