Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು’- ಡಾ ಸಿಎನ್ ಮಂಜುನಾಥ್

ಬೆಂಗಳೂರು:ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಮತದಾರನ ಮನಸ್ಸನ್ನು ಕಲುಷಿತಗೊಳಿಸಬಾರದು ಎಂದು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಹೇಳಿದರು.

ಇಂದು ನಗರದ ಮಲ್ಲೆಶ್ವರಂನ ಬಿಜೆಪಿ ಕಚೇರಿಗೆ ಭೇಟಿ ನೀಡಿದರು. ಡಿ.ಕೆ ಸುರೇಶ್ ಕುಕ್ಕರ್ ಗಳನ್ನು ಹಂಚಿರುವ ಬಗ್ಗೆ ತಮಗೆ ಗಮನಕ್ಕೆ ಬಂದಿದೆಯಾ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಗಮನಕ್ಕೆ ಬಂದಿದೆಯಲ್ಲ ಅಷ್ಟು ಸಾಕು ಎನ್ನುತ್ತಾರೆ. ನಿನ್ನೆ ಕುಮಾರಸ್ವಾಮಿಯವರು ಒಂದು ಸುದೀರ್ಘ ಪ್ರೆಸ್ ಮೀಟ್ ಮಾಡಿ ಎಲ್ಲ ವಿಷಯವನ್ನು ಬಹಿರಂಗ ಮಾಡಿದ್ದಾರೆ ಎಂದರು.

ಅದರೆ ತಾನು ಹೇಳೋದೇನೆಂದರೆ ಚುನಾವಣೆಯಲ್ಲಿ ಸ್ಪರ್ಧೆ ಆರೋಗ್ಯಕರವಾಗಿರಬೇಕು, ಮತದಾರರ ಮನಸ್ಸನ್ನು ಕಲುಷಿತ ಮಾಡಬಾರದು, ಯಾರಿಗೆ ಮತ ಚಲಾಯಿಸಬೇಕು ಯಾವ ಪಕ್ಷ ತನಗೆ ಸರಿ ಅನ್ನೋದನ್ನು ಮತದಾರನ ವಿವೇಚನೆಗೆ ಬಿಡಬೇಕು ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದು ಅರ್ಥಬರುತ್ತದೆ ಎಂದು ಹೇಳಿದರು.