Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

‘ಕರ್ನಾ ಟಕದಲ್ಲಿ ಎಲ್ಲಿಯೂ ಬಿಜೆಪಿ ಗಾಳಿಯಿಲ್ಲ.-ಎಲ್ಲಾ ಕಡೆ ಕಾಂ ಗ್ರೆಸ್‌ಗೆ ಅನುಕೂಲವಾಗಲಿದೆ’- ಡಿ.ಕೆ.ಶಿ

ಗೋಕರ್ಣ: ಬಿಜೆಪಿಯಲ್ಲಿ ಈಗ ಸಿದ್ದಾಂತಕ್ಕೆ ಬೆಲೆಯಿಲ್ಲ. ಪಕ್ಷ ಕಟ್ಟಿ, ಬೆಳೆಸಿ, ಪಕ್ಷಕ್ಕಾಗಿ ದುಡಿದವರು ಈಗ ಮನೆಯಲ್ಲಿದ್ದಾರೆ. ಪಕ್ಷಕ್ಕೆ ಅವರು ಬೇಕಾಗಿಲ್ಲ. ಸಿದ್ದಾಂ ತ ಇಲ್ಲದ ಹೊರಗಿನಿಂದ ಬಂದವರೇ ಈಗ ಬಿಜೆಪಿಯಲ್ಲಿ ಆಳುವವರು ಎಂ ದು ಉಪಮುಖ್ಯಮಂ ತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಮಹಾಬಲೇ ಶ್ವರನ ಆತ್ಮಲಿಂ ಗಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ಆತ್ಮಸ್ಥೈ ರ್ಯ ಹೆಚ್ಚಾಗಿದೆ. ಸರ್ಕಾ ರದ ಗ್ಯಾರಂ ಟಿ ಅನುಷ್ಠಾನಕ್ಕೆ ದೇವರು ನಮಗೆ ಹೆಚ್ಚಿನ
ಶಕ್ತಿ ಕೊಡುತ್ತಾನೆ ಎಂ ದರು.
ಕರ್ನಾ ಟಕದಲ್ಲಿ ಎಲ್ಲಿಯೂ ಬಿಜೆಪಿ ಗಾಳಿಯಿಲ್ಲ. ಎಲ್ಲಾ ಕಡೆ ಕಾಂ ಗ್ರೆಸ್ಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಯವ ಕಾಂ ಗ್ರೆಸ್ ವಾತಾವರಣವಿದೆ.ಅದೇ ಕಾರಣದಿಂ ದ ಈಗ ಮೋ ದಿ ಗ್ಯಾರಂಟಿ ಬಗ್ಗೆ ಬಿಜೆಪಿಯವರು ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದ ಸಿದ್ದಾಂ ತ ನಂಬಿ ಪಕ್ಷಕ್ಕೆ ಬರುವವರಿಗೆ ಸ್ವಾಗತ ಎನ್ನುವ ಮೂಲಕ ಪರೋಕ್ಷವಾಗಿ ಶಿವರಾಮ ಹೆಬ್ಬಾರ ಕಾಂಗ್ರೆಸ್ಸಿಗೆ ಬಂದರೆ ಪಕ್ಷ ಅವರನ್ನು ಸೇರಿಸಿಕೊಳ್ಳಲಿದೆ.ಯಾರು ವಿರೋ ಧ ಮಾಡಿದರೂ ಪಕ್ಷದ ತೀರ್ಮಾನವೇ ಅಂತಿಮ ಎಂದರು.

ಜೆಡಿಎಸ್ ಪಕ್ಷ ಇಂ ದು ಜಾತ್ಯತೀ ತ ಪಕ್ಷವಾಗಿ ಉಳಿದಿಲ್ಲ. ಕೋ ಮುವಾದಿಗಳೊಂ ದಿಗೆ ಕೈಜೋ ಡಿಸಿದ ಜೆಡಿಎಸ್ ಅಪ್ಪ ಮಕ್ಕಳ ಪಕ್ಷವಾಗಿದೆ. ಅವರ ಬಗ್ಗೆ ಮಾತನಾಡುವುದು ವ್ಯರ್ಥ ಎಂದರು