Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಅಯೋಧ್ಯೆ ರಾಮಮಂದಿರ: ಎಕೆ 47ನಿಂದ ಫೈರಿಂಗ್‌- ಕಮಾಂಡರ್‌ಗೆ ಗುಂಡು

ಅಯೋಧ್ಯೆಯ ರಾಮ ಮಂದಿರದಲ್ಲಿ ಭದ್ರತೆಗೆ ನಿಯೋಜಿಸಿದ್ದ ಕಮಾಂಡರ್‌ ರಾಮಪ್ರಸಾದ್‌ಗೆ (53) ಗುಂಡು ತಗುಲಿದೆ.

ಆಯುಧಗಳನ್ನು ಸ್ವಚ್ಛಗೊಳಿಸುತ್ತಿರುವಾಗ ತಿಳಿಯದೇ ತಮಗೆ ತಾವೇ ಎಕೆ-47ನಿಂದ ಗುಂಡು ಹಾರಿಸಿಕೊಂಡಿದ್ದು, ಅವರನ್ನು ಶ್ರೀ ರಾಮ್‌ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಲಕ್ಷೋಗೆ ಕಳುಹಿಸಲಾಗಿದೆ.

ಮಂಗಳವಾರ ಸಂಜೆ 05.45ರ ಸುಮಾರಿಗೆ ಈ ಅವಘಡ ನಡೆದಿದೆ. ಗುಂಡು ಅವರ ಎದೆಯ ಎಡಭಾಗಕ್ಕೆ ನೇರವಾಗಿ ಹೊಡೆದು ಅದರ ಮೂಲಕ ಹಾದುಹೋಗಿದೆ.

ಗುಂಡೇಟಿನಿಂದ ಅವರು ಗಂಭೀರವಾಗಿ ಗಣಾಯಗೊಂಡಿದ್ದಾರೆ ಎಂದು ವರದಿಯಾಗಿದೆ.