Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ಶ್ರೀ ಶರಣಬಸವೇಶ್ವರರ 202ನೇ ಮಹಾರಥೋತ್ಸವಕ್ಕೆ ಭಕ್ತಸಾಗರ.!

 

ಕಲಬುರಗಿ: ಜಿಲ್ಲೆಯ ಆರಾಧ್ಯ ಧೈವ ಶ್ರೀ ಶರಣಬಸವೇಶ್ವರರ 202ನೇ ಮಹಾರಥೋತ್ಸವ ಶನಿವಾರ ಬಹಳ ಅದ್ದೂರಿಯಾಗಿ ನೆರವೇರಿದೆ.

ನಗರದ ಶರಣಬಸವೇಶ್ವರರ ಆವರಣದಲ್ಲಿ ಮಹಾ ರಥೋತ್ಸವ ಮಾಡಲಾಗಿದೆ. ಲಕ್ಷಾಂತರ ಭಕ್ತರ ಮಧ್ಯೆ ರಥೋತ್ಸವ ಸಾಗಿತು. ರಥೋತ್ಸವ ವೇಳೆ 8ನೇ ಪೀಠಾಧಿಪತಿ ಶರಣಬಸಪ್ಪ ಮತ್ತು 9 ನೇ ಪೀಠಾಧಿಪತಿ ಚಿರಂಜಿವಿ ದೊಡ್ಡಪ್ಪ ಅಪ್ಪ‌ ಅವರು ಉಪಸ್ಥಿತರಿದ್ದರು. ಲಕ್ಷಾಂತರ ಭಕ್ತರ ಮಧ್ಯೆ ಅದ್ದೂರಿ ಜಾತ್ರಾ ಮಹೋತ್ಸವ ನಡೆಯಿತು.!