Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

—ಜಕ್ಕಣಯ್ಯ  ಅವರ ವಚನ ……

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಬದ್ಧಜ್ಞಾನಿಯ ಸಂಗದಿಂದ ಅಭೇದ್ಯನಾದನಯ್ಯ.

ಶುದ್ಧಜ್ಞಾನಿಯ ಸಂಗದಿಂದ ಪ್ರಸಿದ್ಧನಾದನಯ್ಯ.

ನಿರ್ಮಲಜ್ಞಾನಿಯ ಸಂಗದಿಂದ ನಿಜಸ್ವರೂಪನಾದನಯ್ಯ.

ಮನಜ್ಞಾನಿಯ ಸಂಗದಿಂದ ಅಗಮ್ಯನಾದನಯ್ಯ.

ಸುಜ್ಞಾನಿಯ ಸಂಗದಿಂದ ಅಗೋಚರನಾದನಯ್ಯ.

ಪರಮಜ್ಞಾನಿಯ ಸಂಗದಿಂದ ಅವಿರಳನಾದನಯ್ಯ.

ಮಹಾಜ್ಞಾನಿಯ ಸಂಗದಿಂದ ಸ್ವಾನುಭವಸಿದ್ಧಾಂತನಾದನಯ್ಯ.

ಸ್ವಯಜ್ಞಾನಿಯ ಸಂಗದಿಂದ ನಿಶ್ಚಿಂತನಾದನಯ್ಯ.

ನಿರಂಜನನ ಸಂಗದಿಂದ ನಿರಾಕುಳನಾದನಯ್ಯ.

ಝೇಂಕಾರನ ಸಂಗದಿಂದ ನಿರ್ಭರಿತನಾದನಯ್ಯ.

ನಿರಾಮಯನ ಸಂಗದಿಂದ ತಾನು ತಾನೇಯಾಗಿರ್ದನಯ್ಯಾಝೇಂಕಾರ ನಿಜಲಿಂಗಪ್ರಭುವೆ.

 

-ಜಕ್ಕಣಯ್ಯ