City Big News Desk.
ಬೆಂಗಳೂರು: ಪತಿಯಿಂದ ದೂರವಿದ್ದ ಮಹಿಳೆಗೆ ಬಾಳು ಕೊಡುತ್ತೇನೆ ಎಂದು ಬಂದ ಅತ್ತೆಯ ಮಗ ಮೋಸ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
26 ವರ್ಷದ ರಂಜಿತ ಎಂಬ ಮಹಿಳೆ ಕೆಲ ವರ್ಷಗಳಿಂದ ಪತಿಯಿಂದ ದೂರವಿದ್ದರು. ಈ ವೇಳೆ ರಂಜಿತ ತಂದೆಯ ಸಹೋದರಿ ಮಗ ಕರಣ್ ಕುಮಾರ್ ಹತ್ತಿರವಾಗಿದ್ದಾನೆ. ಅಲ್ಲದೇ ನಿನಗೆ ಬಾಳು ಕೊಡುತ್ತೇನೆ ಎಂದು ನಂಬಿಸಿ ಕಳೆದ 4 ವರ್ಷಗಳಿಂದ ಇಬ್ಬರೂ ಜೊತೆಯಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ.
4 ವರ್ಷಗಳಿಂದ ಇಬ್ಬರೂ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದರು. ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ಕರಣ್ ಕುಮಾರ್ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಹಿಳೆಯೇ ದುಡಿದು ಆತನನ್ನೂ ಸಾಕಬೇಕಾದ ಸ್ಥಿತಿ. ಮದುವೆ ವಿಷಯ ಪ್ರಸ್ತಾಪಿಸಿದಾಗಲೆಲ್ಲ ಯೋಚಿಸಬೇಡ ಮದುವೆಯಾಗುತ್ತೇನೆ ಎಂದು ಕಥೆ ಕಟ್ಟಿ ನಂಬಿಸುತ್ತಲೇ ಇದ್ದ. ಈಗ ಮಹಿಳೆ ರಂಜಿತಾ 3 ತಿಂಗಳ ಗರ್ಭಿಣಿಯಾಗಿದ್ದು, ಮದುವೆಯಾಗುವಂತೆ ಕರಣ್ ಕುಮಾರ್ ಗೆ ಒತ್ತಾಯಿಸುತ್ತಿದ್ದಂತೆ ಆತ 5000 ರೂಪಾಯಿ ಹಣ ಪಡೆದು ಮನೆಯಲ್ಲಿ ಮದುವೆ ವಿಚಾರ ಮಾತನಾಡುತ್ತೇನೆ ಎಂದು ಹೋದವನು ಪರಾರಿಯಾಗಿದ್ದಾನೆ.
ಇತ್ತ ಕರಣ್ ಕುಮಾರ್ ಗಾಗಿ ಕಾದು ಕಾದು ಆತ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ಮಹಿಳೆ ಕರಣ್ ಮನೆಯವರಿಗೂ ತಿಳಿಸಿದ್ದಾಳೆ. ಆತನ ತಂದೆ-ತಾಯಿ ಮಹಿಳೆಗೆ ನಿಂದಿಸಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಮಹಿಳೆ ನ್ಯಾಯಕ್ಕಾಗಿ ಪೀಣ್ಯ ಠಾಣೆ ಮೆಟ್ಟಿಲೇರಿದ್ದು, ಕರಣ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.