ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ದೂರು ದಾಖಲು

ಕಾಟೇರ ಹಾಗೂ ರಾಬರ್ಟ್ ಸಿನಿಮಾಗಳ ಕಥೆ-ಟೈಟಲ್  ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದ ನಟ ದರ್ಶನ್ ಮೇಲೆ, ಫಿಲಂ ಚೇಂಬರ್‌ನಲ್ಲಿ ದೂರು ದಾಖಲಾಗಿದೆ.

ಟೈಟಲ್ ವಿಚಾರವಾಗಿ ಮಾತನಾಡುತ್ತಾ ನಿರ್ಮಾಪಕರಿಗೆ ಗುಮ್ಮುಕ್ಕೋತಿಯಾ ಎಂದು ಬೆದರಿಕೆ ಹಾಕಿದ್ದಾರೆ ಎಂದು, ಕರ್ನಾಟಕ ಪ್ರಜಾಪರ ವೇದಿಕೆಯ ಕಾರ್ಯಕರ್ತರು ದೂರು ದಾಖಲು ಮಾಡಿದ್ದಾರೆ. ಕಾಟೇರ 50 ದಿನದ ಸಂಭ್ರಮಾಚರಣೆಯಲ್ಲಿ ದರ್ಶನ್ ‘ಯಾಕೆ ಬಂದು ಬಂದು ಗುಮ್ಮಿಸಿಕೊಳ್ಳುತ್ತೀಯಾ?’ ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡಗೆ ಪರೋಕ್ಷವಾಗಿ ಟಾಂಗ್ ನೀಡಿದ್ದರು. ಇದರ ಬೆನ್ನಲ್ಲೇ ಕೇಸ್ ದಾಖಲಾಗಿದೆ.
ತೋರಿಸು

Comments (0)
Add Comment