‘ಡಿಕೆಶಿ-ಸ್ಟಾಲಿನ್ ಬ್ಯುಸಿನೆಸ್ ಪಾಟ್ನರ್ಸ್ ಅದಕ್ಕಾಗಿ ಕರ್ನಾಟಕ, ಜನರ ಹಿತ ಅವರಿಗೆ ಬೇಕಿಲ್ಲ’: ಯೋಗೇಶ್ವರ್

ರಾಮನಗರ: ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಬಿಸಿನೆಸ್ ಪಾಟ್ನರ್ಸ್ ಅದಕ್ಕಾಗಿ ಕರ್ನಾಟಕ, ಜನರ ಹಿತ ಅವರಿಗೆ ಬೇಕಿಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕಾವೇರಿ ನೀರು ವಿಚಾರದಲ್ಲಿ ಡಿಕೆಶಿ ಸರಿಯಾಗಿ ನಿಭಾಯಿಸುತ್ತಿಲ್ಲ. ಕಾವೇರಿ ಕೊಳ್ಳದ ಜನರ ಬಗ್ಗೆ ಅವರಿಗೆ ಅರಿವಿಲ್ಲ. ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಮ್ಮ ನೀರು ಹರಿದುಬಿಟ್ಟಿದ್ದಾರೆ ಎಂದರು.

ಇನ್ನು ತಮಿಳುನಾಡು ಸಿಎಂ ಜೊತೆಗೆ ಡಿಕೆಶಿಗೆ ವ್ಯಾಪಾರ ಸಂಬಂಧ ಇದ್ದು, ಬೆಂಗಳೂರಿನಲ್ಲಿ ಇವರಿಬ್ಬರದ್ದು ಬಹಳ ವ್ಯವಹಾರಗಳಿವೆ. ರಾಜಕೀಯವಾಗಿ ಡಿಕೆಶಿ-ಸ್ಟಾಲಿನ್ ಪಾಟ್ನರ್ಸ್ ಎಂದಿದ್ದಾರೆ.

Comments (0)
Add Comment