‘ತಮ್ಮಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಕಾಲಿಗೆ ಬಿದ್ದ ಎಚ್‌ಡಿಕೆ’ – ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಕಲಬುರಗಿ: ಕುಮಾರಸ್ವಾಮಿ ಅವರು ತಮ್ಮಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಬಿಜೆಪಿ ಹೈಕಮಾಂಡ್ ಕಾಲಿಗೆ ಬಿದ್ದು ಬಂದಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿದ ಅವರು, ಕುಮಾರಸ್ವಾಮಿ ಅವರಿಗೆ ರಾಜಕೀಯವಾಗಿ ಅವರಿಗೆ ಹೇಳೊದಕ್ಕೆ ಬೇರೆ ಏನು ಇಲ್ಲ. ರಾಜ್ಯದ ಹಿತದೃಷ್ಟಿ ಬಿಟ್ಟು ಪಕ್ಷ ಹಾಗೂ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಜೊತೆ ಸೇರಿದ್ದಾರೆ ಅಷ್ಟೆ ಎಂದರು.

ಇನ್ನು ದೆಹಲಿಗೆ ಹೋದಾಗ ಪ್ರಧಾನಿ ಅವರನ್ನು ಭೇಟಿ ಮಾಡಿದ್ದರಲ್ಲ, ಆಗ ಏನು ಚರ್ಚೆ ಮಾಡಿದ್ರು? ಬರಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಮಾತನಾಡಿದ್ದಾರೆ. ಆಗ ಕಾವೇರಿ ನೆನಪು ಅಗಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.

Comments (0)
Add Comment