ಮೂವರು ಭದ್ರತಾ ಅಧಿಕಾರಿಗಳ ಹತ್ಯೆಗೈದ ಇಬ್ಬರು ಉಗ್ರರನ್ನು ಸುತ್ತುವರಿದ ಸೇನೆ

ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಕೋಕರ್ನಾಗ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಭದ್ರತಾ ಅಧಿಕಾರಿಗಳು ಹತರಾದ ಬಳಿಕ ಗುರುವಾರ ನಡೆದ ಭದ್ರತಾ ಪಡೆಗಳ ಎನ್‌ಕೌಂಟರ್‌ನಲ್ಲಿ ಲಷ್ಕರ್ ಎ ತೊಯಿಬಾ ಕಮಾಂಡರ್ ಉಜೈರ್ ಖಾನ್ ಸೇರಿ ಇಬ್ಬರು ಉಗ್ರರು ಸಿಕ್ಕಿ ಬಿದ್ದಿದ್ದಾರೆ.

ಬುಧವಾರ ಆರಂಭವಾದ ಕೋಕರ್ನಾಗ್ ಎನ್‌ ಕೌಂಟರ್‌ ನಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್, ಮೇಜರ್ ಆಶಿಶ್ ಧೋನಕ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಉಪ ಅಧೀಕ್ಷಕ ಹುಮಾಯೂನ್ ಭಟ್ ಹುತಾತ್ಮರಾಗಿದ್ದರು.

ಇನ್ನು ಮೂವರು ಭದ್ರತಾ ಅಧಿಕಾರಿಗಳು ಹತರಾದ ಬಳಿಕ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳಿಗೆ ಉಝೈರ್ ಖಾನ್ ಸೇರಿದಂತೆ 2 ಎಲ್‌ ಇಟಿ ಭಯೋತ್ಪಾದಕರನ್ನು ಸುತ್ತುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments (0)
Add Comment