ರಾಜ್ಯಸಭಾ ಸದಸ್ಯತ್ವದಿಂದ ರಾಘವ ಛಡ್ಡಾ ಅಮಾನತು

ನವದೆಹಲಿ: ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಅವರನ್ನು ಸದಸ್ಯತ್ವದಿಂದ ಅಮಾನತು ಮಾಡಲಾಗಿದೆ. ಹಕ್ಕುಬಾಧ್ಯತಾ ಸಮಿತಿಯು ವರದಿ ಸಲ್ಲಿಸುವವರೆಗೆ ಈ ಅಮಾನತು ಆದೇಶ ಜಾರಿಯಲ್ಲಿ ಇರಲಿದೆ. ಸಂಸತ್ತಿ ಮುಂಗಾರು ಕೊನೆಯ ಅಧಿವೇಶನದ ದಿನವೇ ಈ ಗಮನಾರ್ಹ ಬೆಳವಣಿಗೆ ನಡೆದಿದೆ. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದು, ಹಕ್ಕುಬಾಧ್ಯತಾ ಸಮಿತಿಯ ವರದಿಯನ್ನು ಕೌನ್ಸಿಲ್ ಪಡೆಯುವವರೆಗೆ ನಾನು ರಾಘವ್ ಚಡ್ಡಾ ಅವರನ್ನ ರಾಜ್ಯಸಭಾ ಸೇವೆಯಿಂದ ಅಮಾನತುಗೊಳಿಸುತ್ತೇನೆ ಎಂದು ಘೋಷಿಸಿದ್ದಾರೆ.

Comments (0)
Add Comment