‘ರೈತನ ಮಗನಾಗಿ ನನಗೆ ನೋವಿದೆ’ – ಹೆಚ್.ಡಿ.ದೇವೇಗೌಡ

ಹಾಸನ: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ವಿಚಾರದಲ್ಲಿ ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.

ಈ ಕುರಿತು ಮಾತನಾಡಿದ ಅವರು, ನಾಲ್ಕು ದಿನಗಳ ಹಿಂದೆ ನಾನು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಸರ್ಕಾರ ಇನ್ನೂ ಒಂದು, ಎರಡು ಗಂಟೆಗಳಲ್ಲಿ ತನ್ನ ನಿಲುವನ್ನು ಹೇಳಬಹುದು. ನಾನು ಬರೆದಿರುವ ಪತ್ರದಲ್ಲಿ ನಮ್ಮ ಸ್ಟ್ಯಾಂಡಿಂಗ್ ಕ್ರಾಪ್‌ಗೆ 70 ಟಿಎಂಸಿ ಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ. ಆದರೆ ತಮಿಳರು ಕೊಡುವ ಅಂಕಿ ಅಂಶಗಳೇ ಬೇರೆ ಎಂದರು.

ಇನ್ನು ನಾನು ನೀರಾವರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಒಬ್ಬ ಸಣ್ಣ ಇಂಜಿನಿಯರಿಂಗ್ ಆಗಿ, ದೇಶದ ಪ್ರಧಾನ ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ. ಒಬ್ಬ ರೈತನ ಮಗನಾಗಿ ನನಗೆ ನೋವಿದೆ ಎಂದಿದ್ದಾರೆ.

Comments (0)
Add Comment