‘ರೈತರಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರದ ಬೇಜವಾಬ್ದಾರಿ ತನವೇ ಕಾರಣ’ – ಎಚ್‌‌ಡಿಕೆ

ರಾಮನಗರ: ಕಾವೇರಿ ನೀರಿನ ವಿಚಾರದಲ್ಲಿ ಕರ್ನಾಟಕದ ರೈತರಿಗೆ ಅನ್ಯಾಯವಾಗಲು ರಾಜ್ಯ ಸರ್ಕಾರದ ಬೇಜವಾಬ್ದಾರಿ ತನವೇ ಕಾರಣ ಎಂದು ಮಾಜಿ ಸಿಎಂ ಎಚ್ ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿ‌ನಡೆಸಿ ಮಾತನಾಡಿದ‌ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿಗೆ ವಾಸ್ತವಾಂಶ ತಿಳಿಸುವಲ್ಲಿ ರಾಜ್ಯ ಸರ್ಕಾರ ವಿಫಲಗೊಂಡಿದೆ. 5 ಸಾವಿರ ಕ್ಯುಸೆಕ್ಸ್ ನೀರನ್ನು ಮತ್ತೆ ಬಿಡಿ ಎಂದು ಕಾವೇರಿ ನೀರು ನಿರ್ವಹಣಾ ಮಂಡಳಿ ಹೇಳಿದೆ. ನೀರು ಎಲ್ಲಿಂದ ಬಿಡಲು ಸಾಧ್ಯ.ಸಿಡಬ್ಲುಎಂಎ ಅಧಿಕಾರಿಗಳು ವಾಸ್ತವಾಂಶ ನೋಡದೆ ಎಸಿ ರೂಂ ನಲ್ಲಿ ಕುಳಿತು ನೀರು ಬಿಡಿ ಎನ್ನುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕಾವೇರಿ ನೀರುನಿರ್ವಹಣಾ ಮಂಡಳಿ ಸಭೆಗೆ ರಾಜ್ಯದ ನೀರಾವರಿ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ. ಇವರ ಉದಾಸೀನದಿಂದ ನಮಗೆ ಹಿನ್ನಡೆಯಾಗುತ್ತಿದೆ. ಆದರೆ ತಮಿಳುನಾಡಿನ ಅಧಿಕಾರಿಗಳು 10ರಿಂದ 15 ಮಂದಿ ಪಾಲ್ಗೊಂಡರೆ ನಮ್ಮ ರಾಜ್ಯದಲ್ಲಿ ಕೆಳಹಂತದ ಇಬ್ಬರು ಮೂವರು ಅಧಿಕಾರಿಗಳನ್ನ ಕಳುಹಿಸುತ್ತಾರೆ ಎಂದಿದ್ದಾರೆ.

Comments (0)
Add Comment