ಲೋಕಸಭೆ- ವಿಧಾನಸಭೆ ಒಂದೇ ಸಲ ಚುನಾವಣೆ ನಡೆಸುವುದು ಕಷ್ಟ: ಸಿಎಂ

ಬಳ್ಳಾರಿ: ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲಕ್ಕೆ ನಡಸುವುದು ವಾಸ್ತವದಲ್ಲಿ ಅತ್ಯಂತ ಕಷ್ಟದ ಕೆಲಸ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೇರೆ ಬೇರೆ ರಾಜ್ಯಗಳ ಚುನಾವಣೆಗಳು ಬೇರೆ ಬೇರೆ ಸಮಯದಲ್ಲಿ ನಡೆಯಲಿವೆ. ಅವುಗಳನ್ನು ಮಧ್ಯಂತರದಲ್ಲಿ ವಿಸರ್ಜಿಸಿ ಚುನಾವಣೆ ನಡೆಸಲು ಆಗದು. ಹೀಗಾಗಿ, ಲೋಕಸಭೆ ಚುನಾವಣೆ ಜತೆ ವಿಧಾನಸಭೆಗಳ ಚುನಾವಣೆ ನಡೆಸುವುದು ಅಸಾಧ್ಯ ಎಂದರು.

ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಯನ ನಡೆಸಿ ವರದಿ ಕೊಡಲಿ. ಅದನ್ನು ನೋಡಿ ಪ್ರತಿಕ್ರಿಯಿಸುವೆ ಎಂದರು.

ಲೋಕಸಭೆ- ವಿಧಾನಸಭೆ ಒಂದೇ ಸಲ ಚುನಾವಣೆ ನಡೆಸುವುದು ಕಷ್ಟ: ಸಿಎಂ
Comments (0)
Add Comment