ವಿದ್ಯುತ್ ತಂತಿ ತಾಗಿ ತಂದೆ-ಮಗ ದಾರುಣ ಅಂತ್ಯ..!

ಮನೆ ಮುಂದೆ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ದುರ್ಮರಣ ಹೊಂದಿದ ಘಟನೆ ಬೆಳಗಾವಿಯ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಬೆಳಗಾವಿ : ಮನೆ ಮುಂದೆ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ವಿದ್ಯುತ್ ತಗುಲಿ ತಂದೆ, ಮಗ ದುರ್ಮರಣ ಹೊಂದಿದ ಘಟನೆ ಬೆಳಗಾವಿಯ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಕೃಷಿ ಕುಟುಂಬದ ಪ್ರಭು ಹುಂಬಿ (68), ಈತನ ಮಗ ಮಂಜುನಾಥ ಹುಂಬಿ (29) ಮೃತ ದುರ್ವಿಗಳು.

ಮನೆ ಮುಂದಿನ‌ ವಿದ್ಯುತ್ ಕಂಬಕ್ಕೆ ಬ್ಯಾಲೆನ್ಸ್ ಹಾಕಲಾಗಿದ್ದ ತಂತಿಗೆ ಮೇನ್ ಲೈನ್ ವಿದ್ಯುತ್ ತಂತಿ ಜೋಡಿಸಲಾಗಿತ್ತು.ಅಲ್ಲಿ ಬೆಳೆದಿದ್ದ ಹುಲ್ಲು ತೆಗೆಯುವ ವೇಳೆ ತಂದೆ ಪ್ರಭು ಹುಂಬಿಗೆ ವಿದ್ಯುತ್ ತಗುಲಿದೆ.

ಜೋರಾಗಿ ಕೂಗಿದ ತಂದೆಯನ್ನು ನೋಡಿ ಮಗ ಓಡಿ ಬಂದು ತಗುಲಿದ್ದ ವಿದ್ಯುತ್ ಬಿಡಿಸಲು ಧಾವಿಸಿದ.ಈ ವೇಳೆ ಮಗ ಮಂಜುನಾಥ ಹುಂಬಿಗೂ ವಿದ್ಯುತ್ ತಗುಲಿದೆ. ತಂದೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಂಜುನಾಥನನ್ನು ಆಸ್ಪತ್ರೆಗೆ ದಾಖಿಲಿಸಿ ಚಿಕಿತ್ಸೆ ಕೊಡಿಸುವಷ್ಟರಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ಹೃದಯ ವಿದ್ರಾವಕ ಘಟನೆಯಿಂದ ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.

Comments (0)
Add Comment