‘ ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿ ಬಂಧಿಸಿ’ -ಹೆಚ್‌ಡಿಕೆ ಆಗ್ರಹ

ಬೆಂಗಳೂರು: ದಲಿತರ ಮೇಲೆ ದೌರ್ಜನ್ಯ ಮಾಡಿರೋ ಸಚಿವ ಡಿ ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಿ ಕೂಡಲೇ ಅವರ ಬಂಧನ ಮಾಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರ ದಲಿತ ಉದ್ಧಾರ ಮಾಡ್ತೀವಿ ಅಂತ ಉದ್ದುದ್ದ ಭಾಷಣ ಮಾಡ್ತಾರೆ. ದಲಿತರ ರಕ್ಷಣೆಗೆ ಬಿಲ್ ತಂದಿದ್ದೇವೆ ಅಂತಾರೆ. ಇದೇನಾ ನಿಮ್ಮ ದಲಿತರ ರಕ್ಷಣೆ ಮಾಡೋ ವೈಖರಿ ಎಂದು ಪ್ರಶ್ನಿಸಿದರು.ಸಚಿವರು ಮಚ್ಚು ತಗೊಂಡು ಹೆಣ್ಣು ಮಕ್ಕಳಿಗೆ ಧಮ್ಕಿ ಹಾಕ್ತಾರೆ ಅಂದರೆ ಇದು ಎಂತಹ ವ್ಯವಸ್ಥೆ ಅಂತ ಕಿಡಿಕಾರಿದರು.

ಸಚಿವ ಸುಧಾಕರ್ ಮೇಲೆ ದೂರು ದಾಖಲಾದ ಬಳಿಕ ಯಾವ ಯಾವ ಸಚಿವರ ಮನೆಗೆ ಹೋಗಿದ್ದರು ಅನ್ನುವುದು ಗೊತ್ತಿದೆ. ಗೃಹ ಸಚಿವರ ಮನೆಗೆ ಹೋಗಿದ್ದು ಕೇಸ್ ಮುಚ್ಚಿ ಹಾಕಲು ಅಲ್ಲವಾ ಅಂತ ಪ್ರಶ್ನೆಸಿದರು.

ಎಫ್‌ಐಆರ್ ಹಾಕಿದ ಅಧಿಕಾರಿಯನ್ನು ಬೆದರಿಸೋ ಕೆಲಸ ಮಾಡ್ತಿದ್ದಾರೆ. ಯಾಕೆ ಕೇಸ್ ಹಾಕಿದೆ ಅಂತ ಒತ್ತಡ ಮಾಡ್ತಿದ್ದಾರೆ ಅಂತ ಆರೋಪ ಮಾಡಿದರು.

Comments (0)
Add Comment