ಇಂದಿನಿಂದ ನಿರಂತರ ಒಂದು ತಿಂಗಳು ಬನಶಂಕರಿ ಜಾತ್ರಾ ಮಹೋತ್ಸವ.!

 

ಬಾಗಲಕೋಟೆ : ನಾಡಿನ ಶಕ್ತಿ ದೇವತೆ ಬಾದಾಮಿ ಬನಶಂಕರಿ ಜಾತ್ರಾ ಮಹೋತ್ಸವ ಇಂದಿನಿಂದ ನಿರಂತರ ಒಂದು ತಿಂಗಳು ಹಗಲು ರಾತ್ರಿ ನಡೆಯಲಿದ್ದು, ಈ ಜಾತ್ರೆ ಬನಶಂಕರಿ ಕ್ಷೇತ್ರದಲ್ಲಿ ಇಂದು ಮಹಾರಥೋತ್ಸವ ಜರುಗಲಿದೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ದೇವಿ ಜಾತ್ರೆ ಇಂದಿನಿಂದ ಆರಂಭವಗಲಿದ್ದು, ನಾಡಿನ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ.

ಉತ್ತರ ಕರ್ನಾಟಕ ಭಾಗದ ಪ್ರಸಿದ್ಧವಾದಂತಹ ಜಾತ್ರಾ ಮಹೋತ್ಸವ ವಾಗಿದ್ದು ನಾಡಿನ ವಿವಿಧ ಜಿಲ್ಲೆಗಳಿಂದ ಹಾಗೂ ಅಕ್ಕಪಕ್ಕದ ರಾಜ್ಯಗಳಿಂದಲೂ ಕೂಡ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದುಕೊಳ್ಳುತ್ತಾರೆ. ಈ ನೆಲೆಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಇಂದಿನಿಂದ ನಿರಂತರ ಒಂದು ತಿಂಗಳು ಬನಶಂಕರಿ ಜಾತ್ರಾ ಮಹೋತ್ಸವ.!
Comments (0)
Add Comment