ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ.!

ದಕ್ಷಿಣ ಕನ್ನಡ ಜಿಲ್ಲೆ: ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಇಂದು ಲಕ್ಷ ದೀಪೋತ್ಸವ, ಕುಣಿತ ಭಜನೆ ನಡೆಯಲಿದೆ.

ಇಂದು ರಾತ್ರಿ ಪಂಚ ಶಿಖರವನ್ನೊಳಗೊಂಡ ಚಂದ್ರಮಂಡಲ ರಥದಲ್ಲಿ ಸುಬ್ರಮಣ್ಯ ದೇವರ ಉತ್ಸವ ನಡೆಯಲಿದ್ದು, ಹಿನ್ನೆಲೆಯಲ್ಲಿ ರಥಬೀದಿಯಿಂದ ಕಾಶಿ ಕಟ್ಟೆಯವರೆಗೆ ಲಕ್ಷ ಹಣತೆಯ ದೀಪಗಳನ್ನು ಬೆಳಗಿಸಲಾಗುತ್ತದೆ.

ಅಲ್ಲದೆ ಉರುಳು ಸೇವೆ ಕೂಡ ನಡೆಯಲಿದ್ದು, ಇದನ್ನು ಸುಗಮವಾಗಿ ನಡೆಸಲು ಕುಮಾರಧಾರ ಬಳಿಯಿಂದ ರಸ್ತೆಯ ಒಂದು ಬದಿಯನ್ನು ಸ್ವಚ್ಛಗೊಳಿಸಲಾಗಿದೆ. ಹಾಗೆಯೇ ಉರುಳು ಸೇವೆ ನಡೆಯುವ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ.

ಇಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಲಕ್ಷ ದೀಪೋತ್ಸವ.!
Comments (0)
Add Comment