ಇಂದು ರೈತರ ಖಾತೆಗೆ 2000ರೂ. ಜಮೆ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ 16ನೇ ಕಂತಿನ 2000ರೂ. ಇಂದು ದೇಶಾದ್ಯಂತ ಫಲಾನುಭವಿಗಳ ಖಾತೆಗೆ ಜಮೆಯಾಗಲಿದೆ.

ಇದುವರೆಗೆ ಕೇಂದ್ರ ಸರ್ಕಾರ ರೈತರ ಖಾತೆಗಳಿಗೆ 15 ಕಂತುಗಳನ್ನು ಬಿಡುಗಡೆ ಮಾಡಿದೆ. ಕಳೆದ ನವೆಂಬರ್‌ನಲ್ಲಿ 15ನೇ ಕಂತಿನ 2000ರೂ. ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯಡಿ ಹಣ ಪಡೆಯುವುದಕ್ಕೆ ಸರ್ಕಾರ ಇ-ಕೆವೈಸಿಯನ್ನು ಕಡ್ಡಾಯಗೊಳಿಸಿದ್ದು, ಇ-ಕೆವೈಸಿ ಮಾಡಿಸದ ರೈತರಿಗೆ ಹಣ ಲಭ್ಯವಾಗುವುದಿಲ್ಲ.

ಹೀಗಾಗಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಕಿಸಾನ್‌ ಸಮ್ಮಾನ್‌ ಹಣ ಖಾತೆಗೆ ಬರುತ್ತದೆ.

Comments (0)
Add Comment