ಇನ್ನುಮುಂದೆ ಎಲ್ಲ ಗ್ರಾ.ಪಂ.ಗಳಲ್ಲಿ ಬಜೆಟ್‌ ಮಂಡನೆ

ರಾಜ್ಯದಲ್ಲಿ ಗ್ರಾಮ ಪಂಚಾಯತ್‌ಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು ಇನ್ನುಮುಂದೆ ಪಂಚಾಯತ್‌ಗಳಲ್ಲಿಯೂ ಬಜಿಟ್‌ ಮಂಡಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚಿಸಿದ್ದಾರೆ. ಗ್ರಾಮ ಪಂಚಾಯತ್‌ಗಳ
ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ & ವಿತ್ತೀಯ ಶಿಸ್ತಿನ ಅರಿವು ಮೂಡಿಸಲು ಬಜೆಟ್‌ ಮಂಡಿಸಿ ಅನುಮೋದನೆಪಡೆಯುವಂತೆ ಎಲ್ಲ ಗ್ರಾ.ಪಂ. ಅಧ್ಯಕ್ಷಕರಿಗೆ ಪತ್ರ ಬರೆದಿದ್ದಾರೆ.

ಗ್ರಾ.ಪಂ.ಗಳ ಸಭೆಗಳಲ್ಲಿ ಮಾ.10ರೊಳಗೆ ಅಭಿವೃದ್ಧಿ ಯೋಜನೆ ಒಳಗೊಂಡ ಆಯವ್ಯಯ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕೆಂದು ಸಚಿವರು ಸೂಚನೆ ಕೊಟ್ಟಿದ್ದಾರೆ.

Comments (0)
Add Comment