ಇಬ್ಬರು ವಾಂಟೆಡ್ ಗ್ಯಾಂಗ್​ಸ್ಟರ್​ಗಳ ಹತ್ಯೆ – ಅಪಹರಣಕ್ಕೊಳಗಾಗಿದ್ದ ಉದ್ಯಮಿಯ ರಕ್ಷಣೆ

ಪಂಜಾಬ್: ಉದ್ಯಮಿಯೊಬ್ಬರ ಅಪಹರಣದಲ್ಲಿ ಭಾಗಿಯಾಗಿದ್ದ ಇಬ್ಬರು ವಾಂಟೆಡ್​ ಗ್ಯಾಂಗ್​ಸ್ಟರ್​ಗಳನ್ನು ಪಂಜಾಬ್ ಪೊಲೀಸರು ಹತ್ಯೆಗೈದು ಅಪಹರಣಕ್ಕೊಳಗಾಗಿದ್ದ ಉದ್ಯಮಿಯನ್ನು ರಕ್ಷಿಸಿದ್ದಾರೆ.

ಸಂಭವ್ ಜೈನ್ ಎಂಬ ವ್ಯಕ್ತಿಯನ್ನು 7 ಆರೋಪಿಗಳು ಅಪಹರಿಸಿದ್ದು, ಪೊಲೀಸರು ಗುಂಡಿನ ದಾಳಿ ನಡೆಸಿದ್ದು ಈ ವೇಳೆ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಚಕಮಕಿ ಬಳಿಕ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.

ಇನ್ನು ಇಬ್ಬರು ಆರೋಪಿಗಳಾದ ಸಂಜು ಬಹಮಾನ್ ಮತ್ತು ಶುಭಂ ಗೋಪಿ ಪೊಲೀಸರೊಂದಿಗೆ ಕ್ರಾಸ್ ಫೈರಿಂಗ್‌ನಲ್ಲಿ ಸಾವನ್ನಪ್ಪಿದ್ದಾರೆ.

ಜತಿನ್, ಪ್ರೇಮ್‌ಜಿತ್, ಆದಿತ್ಯ ಶರ್ಮಾ, ಮಂತೋಷ್ ಮತ್ತು ಮಂದೀಪ್ ಎಂಬ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Comments (0)
Add Comment