ಈರೋಡ್ ನ ಸಂಸದ ಎ. ಗಣೇಶಮೂರ್ತಿ ಆತ್ಮಹತ್ಯೆಗೆ ಯತ್ನ.!

 

 

ತಮಿಳುನಾಡು: ಈರೋಡ್ ನ ಸಂಸದ ಎ. ಗಣೇಶಮೂರ್ತಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ತಿ ಎಂದು ತಿಳಿದುಬಂದಿದ್ದು,  ಅವರನ್ನು ಕೋಯಮತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಯಂತೆ.!

ಅವರ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.,ಮೂಲತಃ ವೈಕೋ ಅವರ ಎಂಡಿಎಂಕೆ ಪಕ್ಷದ ನಾಯಕರಾಗಿರುವ ಗಣೇಶಮೂರ್ತಿ ಅವರು 2019ರಲ್ಲಿ ಡಿಎಂಕೆ ಬೆಂಬಲದೊಂದಿಗೆ ಈರೋಡ್ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರು.

ಇತ್ತೀಚೆಗೆ ಮಾನಸಿಕವಾಗಿ ನೊಂದಿದ್ದ ಅವರು ಭಾನುವಾರ ಬೆಳಿಗ್ಗೆ ಮನೆಯಲ್ಲಿ ವಿಷಕಾರಿ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದ್ದಾರೆ

ಆತ್ಮಹತ್ಯೆ ಯತ್ನದ ಬಗ್ಗೆ ಅವರ ಕುಟುಂಬದವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಡಿಎಂಕೆ ನಾಯಕರು ಗಣೇಶಮೂರ್ತಿ ಅವರನ್ನು ನೋಡಲು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

 

ಈರೋಡ್ ನ ಸಂಸದ ಎ. ಗಣೇಶಮೂರ್ತಿ ಆತ್ಮಹತ್ಯೆಗೆ ಯತ್ನ.!
Comments (0)
Add Comment