ಈ ತಿಂಗಳಿಂದ ಜೂನ್ ತಿಂಗಳವರಗೆ ತಾಪಮಾನದ ಬಗ್ಗೆ ಐಎಂಡಿ ಹೇಳಿದ್ದು ಇದು.!

 

ನವದೆಹಲಿ: ಏಪ್ರಿಲ್ನಿಂದ ಜೂನ್ವರೆಗೆ ದೇಶದಲ್ಲಿ ಅತ್ಯಂತ ತೀವ್ರ ಪ್ರಮಾಣದ ಸೆಕೆ ಇರಲಿದೆ. ದೇಶದ ಮಧ್ಯಭಾಗ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಬಿಸಿಗಾಳಿಯ ತೀವ್ರತೆ ಹೆಚ್ಚಿರಲಿದೆ. ಉತ್ತರ ಕರ್ನಾಟಕವು ಬಿಸಿಗಾಳಿಯ ಕೆಟ್ಟ ಪರಿಣಾಮವನ್ನು ಎದುರಿಸಲಿದೆ.

ಕೇಂದ್ರ ಹವಾಮಾನ ಇಲಾಖೆಯು (ಐಎಂಡಿ) ಸೋಮವಾರ ಈ ಎಚ್ಚರಿಕೆ ನೀಡಿದೆ. ಏಳು ಹಂತಗಳ ಲೋಕಸಭಾ ಚುನಾವಣೆಯುದ್ದಕ್ಕೂ ಬಿಸಿಗಾಳಿಯ ತೀವ್ರತೆ ಕಾಡಲಿದೆ.

ಏಪ್ರಿಲ್ನಿಂದ ಜೂನ್ವರೆಗೆ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಿರಲಿದೆ. ದೇಶದ ಮಧ್ಯಭಾಗದಲ್ಲಿ ಹಾಗೂ ದಕ್ಷಿಣ ಭಾರತದ ಪಶ್ಚಿಮ ಭಾಗದಲ್ಲಿ ಹೆಚ್ಚಿನ ತಾಪಮಾನದ ಸಾಧ್ಯತೆಯು ಜಾಸ್ತಿ ಇದೆ ಎಂದು ಇಲಾಖೆ ತಿಳಿಸಿದೆ.

 

ಈ ತಿಂಗಳಿಂದ ಜೂನ್ ತಿಂಗಳವರಗೆ ತಾಪಮಾನದ ಬಗ್ಗೆ ಐಎಂಡಿ ಹೇಳಿದ್ದು ಇದು.!
Comments (0)
Add Comment