ಈ ಸಲ ವಿಶ್ವಕಪ್ ನಮ್ದೆ : ಸಿಎಂ.!

ಮೈಸೂರು: ಈ ಬಾರಿ ಟೀಂ ಇಂಡಿಯಾ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ. ಸಲ ಕಪ್ ನಮ್ಮೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿ, ನಾಡಿದ್ದು ನಡೆಯಲಿರುವ ಭಾರತಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಗೆಲ್ಲುತ್ತದೆ. ನಾನು ಬೆಂಗಳೂರಿನಲ್ಲಿ ಒಂದು ಪಂದ್ಯ ನೋಡಿದ್ದೆ.

ಮುಂದಿನ ಫೈನಲ್ ಪಂದ್ಯವನ್ನ ವೀಕ್ಷಿಸುತ್ತೇನೆ. ಟೀಂ ಆಗಿ ಆಡಿದರೆ ಗೆಲುವು ಸಾಧ್ಯ, ಎಲ್ಲರೂ ಒಗ್ಗೂಡಿ ಉತ್ತಮ ಪ್ರದರ್ಶನ ನೀಡಿದರೆ ಜಯ ಖಚಿತ ಎಂದಿದ್ದಾರೆ.

ಈ ಸಲ ವಿಶ್ವಕಪ್ ನಮ್ದೆ : ಸಿಎಂ.!
Comments (0)
Add Comment