ಐಶ್ವರ್ಯ-ಅಭಿಷೇಕ್ ವಿಚ್ಚೇದನ ವದಂತಿಗೆ ಪುಷ್ಠಿ ನೀಡಿದ ಅಮಿತಾಬ್ ಟ್ವೀಟ್

ಮುಂಬೈ: ಬಿ ಟೌನ ತಾರಾ ಜೋಡಿ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯದಲ್ಲಿ ಬಿರುಕುಮೂಡಿದ್ದು, ಅವರು ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಇದೀಗ ಇವರಿಬ್ಬರ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬ ಸುದ್ದಿಗೆ ಅಮಿತಾಬ್ ಬಚ್ಚನ್ ಟ್ವೀಟ್ ಪುಷ್ಠಿ ನೀಡುವಂತಿದೆ.

ಹೌದು… ಕೆಲ ವಾರಗಳಿಂದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಅವರ ಮಧ್ಯೆ ವಿರಸ ಉಂಟಾಗಿದ್ದು, ಇದೀಗ ಅಮಿತಾಬ್ ಬಚ್ಚನ್ ಟ್ವೀಟ್ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. “ಎಲ್ಲವನ್ನೂ ಹೇಳಿಯಾಯ್ತು, ಎಲ್ಲವನ್ನೂ ಮಾಡಿಯಾಯ್ತು, ಈಗ ಹೇಳಿದ್ದನ್ನು ಮಾಡಬೇಕಾಗಿದೆ, ಮಾಡಿದ್ದನ್ನು ಹೇಳಬೇಕಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಸಾಲುಗಳೊಂದಿಗೆ ತಮ್ಮ ಫೋಟೋವನ್ನು ಹಂಚಿಕೊಂಡಿದ್ದು, ಇದು ಸಂಚಲನ ಸೃಷ್ಟಿಸಿದೆ.

ಪ್ರೀತಿಸಿ ಮದುವೆಯಾದ ಈ ಜೋಡಿ ತಮ್ಮ 16 ವರ್ಷದ ದಾಂಪತ್ಯವನ್ನು ಅಂತ್ಯ ಮಾಡಿಕೊಳ್ಳಲಿದೆಯೇ ಎಂಬುದು ಎಲ್ಲರಲ್ಲೂ ಕಾಡುತ್ತಿದೆ. ಇನ್ನು ಈ ಇವರಿಬ್ಬರ ಮಧ್ಯೆ ವಿರಸ ಮೂಡಲು ಕಾರಣಗಳೇನು ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

Comments (0)
Add Comment