ಕಾಂಗ್ರೆಸ್‌ ತೊರೆದು ಶಿವಸೇನೆಗೆ ಮಿಲಿಂದ್‌ ದಿಯೋರಾ ಸೇರ್ಪಡೆ

ಮುಂಬೈ: ಇಂದು ಕಾಂಗ್ರೆಸ್‌ ತೊರೆದಿದ್ದ ಮಿಲಿಂದ್‌ ದಿಯೋರಾ ಅವರು ಇದೀಗ ಶಿವಸೇನೆಗೆ ಸೇರ್ಪಡೆಗೊಂಡಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅವರ ಸಮ್ಮುಖದಲ್ಲಿ ಶಿವಸೇನೆಯ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಶಿಂಧೆ ಅವರು ಮಿಲಿಂದ್‌ಗೆ ಹೂಗುಚ್ಚ ನೀಡಿ ಬಳಿಕ ಪಕ್ಷದ ಬಾವುಟ ಕೊಟ್ಟು ಬರಮಾಡಿಕೊಂಡಿದ್ದಾರೆ.

ಇಂದು ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಎಕ್ಸ್‌ನಲ್ಲಿ ಮಿಲಿಂದ್‌ ದಿಯೋರಾ ಅವರು ಪಕ್ಷ ತೊರೆಯುವುದಾಗಿ ಘೊಷಣೆ ಮಾಡಿದ್ದರು. ಇದಾದ ಬಳಿಕ ಏಕನಾಥ್‌ ಶಿಂಧೆ ನೇತೃತ್ವದ ಶಿವಸೇನೆಗೆ ಮಿಲಿಂದ್‌ ಅವರು ಸೇರುತ್ತಾರೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದರೆ ಮಧ್ಯಾಹ್ನದ ವೇಳೆಗೆ ಈ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಶಿವಸೇನೆ ಸೇರುವುದಕ್ಕೂ ಮೊದಲು ಮಿಲಿಂದ್‌ ಅವರು ತಮ್ಮ ಕುಟುಂಬದ ಜೊತೆಗೆ ದೇವರ ದರ್ಶನ ಪಡೆದಿದ್ದಾರೆ.

Comments (0)
Add Comment