ಕೋಮು ಶಕ್ತಿ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡರನ್ನು ಹುಡುಕಿಕೊಡಿ.!

 

ಬೆಂಗಳೂರು: BJP-JDS ಮೈತ್ರಿಯನ್ನು ಕಾಂಗ್ರೆಸ್‌ ಕಟುವಾಗಿ ಟೀಕಿಸಿದ್ದು, 25 ವರ್ಷ ಹಿಂದೆ ಕೋಮು ಶಕ್ತಿ ವಿರುದ್ಧ ತೊಡೆ ತಟ್ಟಿದ್ದ ಅಂದಿನ ದೇವೇಗೌಡರು ಈಗ ಕಳೆದುಹೋಗಿದ್ದಾರೆ ಎಂದು ವ್ಯಂಗ್ಯವಾಡಿದೆ.

ಟ್ವಿಟ್ ಮಾಡಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, RSSನಂತಹ ವಿಧ್ವಂಸಕ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿದ್ದು ಅವರಿಗೆ ನೆನಪಿದೆಯೇ? ಈಗ ಅದೇ ವಿಚ್ಛಿದ್ರಕಾರಿ ಸಂಘಟನೆಗಳೊಂದಿಗೆ ಕೈಜೋಡಿಸಿದ್ದಾರೆ. ಇದು ಅವರ ದುರಂತವೋ, ಅವರನ್ನು ಸೆಕ್ಯುಲ‌ರ್ ಎಂದು ನಂಬಿದವರ ದುರಂತವೋ ತಿಳಿಯದು ಎಂದು ಕುಟುಕುದೆ.

ಕೋಮು ಶಕ್ತಿ ವಿರುದ್ಧ ತೊಡೆ ತಟ್ಟಿದ್ದ ದೇವೇಗೌಡರನ್ನು ಹುಡುಕಿಕೊಡಿ.!
Comments (0)
Add Comment