ಗುಬ್ಬಿ ತೊರೆ ಮಠದ ರಾಜಶೇಖರ ಸ್ವಾಮೀಜಿ ಇನ್ನಿಲ್ಲ.!

 

ತುಮಕೂರು: ರಾಜ್ಯದ ಪ್ರಮುಖ ಮಠಗಳಲ್ಲಿ ಒಂದಾದ ತುಮಕೂರಿನ ಗುಬ್ಬಿಯ ತೊರೆ ಮಠದ ಶ್ರೀ ರಾಜಶೇಖರ ಸ್ವಾಮೀಜಿ (75) ನಿಧನರಾಗಿದ್ದಾರೆ.

ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಶ್ರೀ ಮಠದ ಪೀಠಾಧ್ಯಕ್ಷರು ಕೂಡ ಆಗಿದ್ದರು.

1988ರಿಂದಲೇ ಮಠವನ್ನು ಮುನ್ನಡೆಸುತ್ತಿದ್ದ ಇವರು ಅಪಾರ ಭಕ್ತರನ್ನು ಬಿಟ್ಟು ಅಗಲಿದ್ದಾರೆ. ಸ್ವಾಮೀಜಿ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

Comments (0)
Add Comment