ಜೈಲಿಗೆ ಭೇಟಿ ಮಾಡಿ ಸೋನುಗೆ ಧೈರ್ಯ ಹೇಳಿದ ರಾಕೇಶ್‌

ಮಗುವನ್ನು ಅಕ್ರಮವಾಗಿ ಸಾಕುವ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ಸೋನು ಶ್ರೀನಿವಾಸ್‌ ಗೌಡ ಅವರನ್ನು ರಾಕೇಶ್‌ ಅಡಿಗೆ ಭೇಟಿ ಮಾಡಿ ಧೈರ್ಯ ಹೇಳಿದ್ದಾರೆ.

ದತ್ತು ವಿಚಾರದಲ್ಲಿ ನಾನು ಸುಳ್ಳು ಹೇಳಿದ್ದೇನೆ. ಅದು ಟ್ರೋಲ್‌ ಅವರಿಗೆ ಕೌಂಟರ್‌ ಕೊಡುವ ಉದ್ದೇಶವಾಗಿತ್ತು.

ಈಗ ನೋಡಿದರೆ ಇಂತಹ ಶಿಕ್ಷೆ ಎಂದು ಸೋನು ಅಳಲು ತೋಡಿಕೊಂಡಿರುವ ಕುರಿತು ರಾಕೇಶ್‌ ಮಾತನಾಡಿದ್ದಾರೆ.
ಮೊನ್ನೆಯಷ್ಟೇ ಸೋನು ಗೌಡಗೆ CJM ಕೋರ್ಟ್‌ ನ್ಯಾಯಾಧೀಶರು 14ದಿನ ನ್ಯಾಯಾಂಗ ಬಂಧನ ಒಪ್ಪಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4 ದಿನಗಳ ಕಾಲ ಪೊಲೀಸ್‌ಗೆ ಕಸ್ಟಡಿ ಪಡೆದಿದ್ದರು.

Comments (0)
Add Comment