ಡಿ.ದೇವರಾಜ ಅರಸು ನಿಗಮದ ಸೌಲಭ್ಯಕ್ಕೆ ಡಿ.15 ರಂದು ಆಯ್ಕೆ ಸಮಿತಿ ಸಭೆ: ಅರ್ಜಿದಾರರು  ಗುರುತಿನಿ ಚೀಟಿಯೊಂದಿಗೆ ಹಾಜರ್.!

 

ದಾವಣಗೆರೆ, : ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ಹಾಗೂ ಇದರ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮಗಳಿಂದ ಅನುಷ್ಠಾನಗೊಳಿಸಲಾಗುತ್ತಿರುವ ವಿವಿಧ ಸಾಲ, ಸೌಲಭ್ಯ ಯೋಜನೆಗಳಿಗೆ ಸಂಬಂಧಿಸಿದಂತೆ ಡಿ.15 ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಸಭೆಯನ್ನು ಆಯೋಜಿಸಲಾಗಿದೆ.

ಅರ್ಜಿದಾರರು ಕಡ್ಡಾಯವಾಗಿ ತಾವುಗಳು ಸಾಲ, ಸೌಲಭ್ಯ ಕೋರಿ ಆನ್‍ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯೊಂದಿಗೆ ಹಾಗೂ ಗುರುತಿನ ಚೀಟಿಯೊಂದಿಗೆ ಹಾಜರಾಗಬೇಕು ಎಂದು ನಿಗಮದ ವ್ಯವಸ್ಥಾಪಕ ಸಾತ್ವಿಕ್ ತಿಳಿಸಿದ್ದಾರೆ.

ಡಿ.ದೇವರಾಜ ಅರಸು ನಿಗಮದ ಸೌಲಭ್ಯಕ್ಕೆ ಡಿ.15 ರಂದು ಆಯ್ಕೆ ಸಮಿತಿ ಸಭೆ: ಅರ್ಜಿದಾರರು  ಗುರುತಿನಿ ಚೀಟಿಯೊಂದಿಗೆ ಹಾಜರ್.!
Comments (0)
Add Comment